
ಮಂಗಳೂರು (ಜ.29): ಆರ್'ಎಸ್'ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆರ್'ಎಸ್'ಎಸ್ ಸಮವಸ್ತ್ರದಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದೆ.
ಟ್ರೂ ಮೀಡಿಯಾ ನೆಟ್'ವರ್ಕ್ ಫೇಸ್ ಬುಕ್ ಪೇಜ್'ನಲ್ಲಿ ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. "ಅಯ್ಯಯ್ಯೋ ಭಯೋತ್ಪಾಧಕ ಮುದುಕ ಭಟ್ಟಾ... ಮಂಗನಿಂದ ಮಾನವ ಅಂತಾ ಸಾಬೀತು" ಎಂದು ಪೋಸ್ಟ್ ಮಾಡಿ ಅವಮಾನ ಮಾಡಿದ್ದಾರೆ.
ಬಿಳಿ ಶರ್ಟ್ ಜೊತೆ ಪ್ಯಾಂಟ್ ಹಾಕಿ ಗಣವೇಷದಲ್ಲಿ ಕೋಲು ಹಿಡಿದಿರುವ ಪ್ರಭಾಕರ್ ಭಟ್ ಫೋಟೋ ನಿನ್ನೆ ಕೆಲ ಫೇಸ್'ಬುಕ್ ಪೇಜ್'ಗಳಲ್ಲಿ ವೈರಲ್ ಆಗಿತ್ತು. ಇದರಲ್ಲಿ ಆಕ್ಷೇಪಾರ್ಹ ಕಾಮೆಂಟ್ ಗಳನ್ನು ಮಾಡಲಾಗಿತ್ತು.
ಚಡ್ಡಿಯಿಂದ ಪ್ಯಾಂಟ್'ಗೆ ಬರಲು 60 ವರ್ಷ ಬೇಕಾಯ್ತು. ಇನ್ನು ಅದೇನು ದೇಶ ಸೇವೆ ಮಾಡ್ತೀರಾ ನೀವು ಅಂತ ಕಾಮೆಂಟ್ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.