
ಅಹಮದಾಬಾದ್(ಅ.17): ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಅಚ್ಛೇ ದಿನ್ ಬಂದವೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ತವರು ರಾಜ್ಯ ಗುಜರಾತ್'ನಲ್ಲಿ ಮದ್ಯ ನಿಷೇಧ ಇದ್ದರೂ ಮದ್ಯ ಪ್ರಿಯರಿಗೆ ಮಾತ್ರ ಭಾನುವಾರ ಅಚ್ಛೇ ದಿನ್ ಬಂದೇ ಬಿಟ್ಟಿತು.
ವಡೋದರಾ ಸಮೀಪದ ದುಮಾಡ್ ಹೈವೇನಲ್ಲಿ ಅಕ್ರಮವಾಗಿ ಮದ್ಯದ ಟಿನ್'ಗಳನ್ನು ತುಂಬಿಕೊಂಡು ಹೊರಟ ಕಾರ್ ಅಪಘಾತಕ್ಕೀಡಾಯಿತು. ಕೂಡಲೇ ಅಕ್ಕಪಕ್ಕದ ಜನರು ಮುಗಿಬಿದ್ದು ಎಲ್ಲ ಕ್ಯಾನ್ ಗಳನ್ನು ಬಾಚಿಕೊಂಡರು. ‘ಅಚ್ಛೇ ದಿನ್ ಆಗಯೇ’ ಎಂದು ಸ್ಥಳದಿಂದ ಕಾಲ್ಕಿತ್ತು ಪಾರ್ಟಿ ಮಾಡಿದರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.