
ಲಖನೌ(ಡಿ.3): ಉತ್ತರಪ್ರದೇಶದಲ್ಲಿ ಬಿಜೆಪಿ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸೋತ ಪ್ರತಿಪಕ್ಷಗಳು ಮತ್ತೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ನೆಪವನ್ನು ಶುರುಮಾಡಿಕೊಂಡಿವೆ. ಧಮ್ಮಿದ್ದರೆ ಇವಿಎಂ ಇಲ್ಲದೇ ಬಿಜೆಪಿ ಚುನಾವಣೆ ಎದುರಿಸಲಿ. ಉತ್ತರಪ್ರದೇಶದ ಚುನಾವಣೆಗಳಲ್ಲಿ ಇವಿಎಂ ತಿರುಚಲ್ಪಟ್ಟಿದ್ದವು ಎಂದು ಬಿಎಸ್ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕ ಪ್ರದೀಪ್ ಮಾಥೂರ್ ಆರೋಪಿಸಿದ್ದಾರೆ.
‘ವಿದ್ಯುನ್ಮಾನ ಮತಯಂತ್ರಗಳನ್ನು ಬಳಸದೇ ಮತಪತ್ರ ಗಳನ್ನು ಬಳಸಿ 2019ರ ಲೋಕಸಭಾ ಚುನಾವಣೆ ನಡೆಸಿದರೆ ಬಿಜೆಪಿ ಸೋಲಲಿದೆ. ಇವಿಎಂ ಇಲ್ಲದೇ ಹೋದರೆ ಬಿಜೆಪಿ ಖಂಡಿತ ಗೆಲ್ಲಲ್ಲ’ ಎಂದು ಮಾಯಾವತಿ ಹೇಳಿದ್ದಾರೆ. ಜನಾದೇಶ ತಮ್ಮ ಪರ ಇದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಹಾಗಿದ್ದಾಗ ಇವಿಎಂ ಬದಿಗಿರಿಸಿ ಮತಪತ್ರಗಳನ್ನು ಬಳಸುವ ಹಳೆಯ ವಿಧಾನದ ಮೂಲಕ ಚುನಾವಣೆ ಎದುರಿಸಲಿ ಎಂದು ಮಾಯಾವತಿ ಸವಾಲೆಸೆದಿದ್ದಾರೆ.
ಎಸ್ಪಿಯ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ‘ಇವಿಎಂ ಮೂಲಕ ಮತದಾನ ನಡೆದ ಕಡೆ ಬಿಜೆಪಿ ಜಯದ ಪ್ರಮಾಣ ಪ್ರತಿಶತ 46. ಆದರೆ ಮತಪತ್ರಗಳ ಮೂಲಕ ನಡೆದ ಚುನಾವಣೆಗಳಲ್ಲಿ ಬಿಜೆಪಿ ಜಯದ ಪ್ರಮಾಣ ಪ್ರತಿಶತ 15’ ಎನ್ನುವ ಮೂಲಕ ಇವಿಎಂ ಬಳಕೆಯನ್ನು ವಿರೋಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.