ಕಿಡ್ನ್ಯಾಪಿಂಗ್ ಪ್ರಕರಣದಲ್ಲಿ 'ಎರಡು ಕನಸು' ಚಿತ್ರದ ನಿರ್ದೇಶಕ ಬಂಧನ

Published : May 27, 2017, 12:20 PM ISTUpdated : Apr 11, 2018, 12:49 PM IST
ಕಿಡ್ನ್ಯಾಪಿಂಗ್ ಪ್ರಕರಣದಲ್ಲಿ 'ಎರಡು ಕನಸು' ಚಿತ್ರದ ನಿರ್ದೇಶಕ ಬಂಧನ

ಸಾರಾಂಶ

ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿಲ್ಲವಾದ್ದರಿಂದ "ಎರಡು ಕನಸು" ಸೋತಿತು ಎಂಬುದು ನಿರ್ದೇಶಕ ಮದನ್ ಅಸಮಾಧಾನ. ಈ ಕಾರಣಕ್ಕೆ ತನ್ನ ಸ್ನೇಹಿತರಾದ ಚಲಪತಿಮೂರ್ತಿ ಮತ್ತು ಮೋಹನ್ ಕಿರಣ್ ಅವರ ನೆರವಿನಿಂದ ಪರಮೇಶ್'ರನ್ನು ಅಪಹರಣ ಮಾಡಿಸಿದ ಆರೋಪ ಮದನ್ ಮೇಲಿದೆ.

ಬೆಂಗಳೂರು(ಮೇ 27): ಚಿತ್ರಕ್ಕೆ ಸರಿಯಾಗಿ ಪ್ರಚಾರ ಕೊಟ್ಟಿಲ್ಲವೆಂದು ಸಿಟ್ಟಿಗೆದ್ದು ಜಾಹೀರಾತು ಕಂಪನಿಯೊಂದರ ಮಾಲೀಕನನ್ನು ಅಪಹರಣ ಮಾಡಿದ ಆರೋಪದ ಮೇಲೆ ನಿರ್ದೇಶಕ ಮದನ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ಮದನ್ ಅವರು ಇತ್ತೀಚೆಗೆ ತೆರೆ ಕಂಡ "ಎರಡು ಕನಸು" ಚಿತ್ರದ ನಿರ್ದೇಶಕರಾಗಿದ್ದಾರೆ. ವಿಜಯ್ ರಾಘವೇಂದ್ರ ಮತ್ತು ಕಾರುಣ್ಯ ರಾಮ್ ಅಭಿನಯದ ಎರಡು ಕನಸು ಚಿತ್ರ ಬಾಕ್ಸಾಫೀಸ್'ನಲ್ಲಿ ಮುಗ್ಗರಿಸಿದೆ. ಪರಮೇಶ್ ಎಂಬುವವರ ಸಂಸ್ಥೆಯೊಂದಿಗೆ ಈ ಚಿತ್ರದ ಪ್ರೊಮೋಷನ್'ಗೆ 8 ಲಕ್ಷ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತೆನ್ನಲಾಗಿದೆ. ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಿಲ್ಲವಾದ್ದರಿಂದ "ಎರಡು ಕನಸು" ಸೋತಿತು ಎಂಬುದು ನಿರ್ದೇಶಕ ಮದನ್ ಅಸಮಾಧಾನ. ಈ ಕಾರಣಕ್ಕೆ ತನ್ನ ಸ್ನೇಹಿತರಾದ ಚಲಪತಿಮೂರ್ತಿ ಮತ್ತು ಮೋಹನ್ ಕಿರಣ್ ಅವರ ನೆರವಿನಿಂದ ಪರಮೇಶ್'ರನ್ನು ಅಪಹರಣ ಮಾಡಿಸಿದ ಮದನ್ 8 ಲಕ್ಷ ವಾಪಸ್ ಕೊಡುವಂತೆ ತಾಕೀತು ಮಾಡಿದ್ದರೆಂಬ ಆರೋಪವಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ಮದನ್, ಚಲಪತಿಮೂರ್ತಿ ಮತ್ತು ಮೋಹನ್ ಕಿರಣ್ ಈ ಮೂವರನ್ನೂ ಬಂಧಿಸಿ ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ