
ನವದೆಹಲಿ (ಜೂ. 26): ಕಾರ್ಮಿಕ ಭವಿಷ್ಯ ನಿಧಿ ಚಂದಾದಾರರು ಪಡೆಯುತ್ತಿರುವ ಮಾಸಿಕ ಪಿಂಚಣಿಯನ್ನು ಈಗಿರುವ ಕನಿಷ್ಠ 1000 ರು.ನಿಂದ 2000 ರು.ಗೆ ಏರಿಸುವ ಪ್ರಸ್ತಾಪವನ್ನು ಇಪಿಎಫ್ಒ ಮಂಡಳಿ ಮುಂದಿಟ್ಟಿದೆ.
ಬುಧವಾರ ನಡೆಯಲಿರುವ ಮಂಡಳಿಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಒಂದು ವೇಳೆ ಪ್ರಸ್ತಾಪವನ್ನು ಸರ್ಕಾರ ಮಾನ್ಯ ಮಾಡಿದರೆ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 3000 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಯೋಜನೆ ಜಾರಿಯಾದರೆ 40 ಲಕ್ಷ ಚಂದಾದಾರರಿಗೆ ಲಾಭವಾಗಲಿದೆ. ಇದೇ ವೇಳೆ ಮಂಡಳಿಯ ನಿಧಿಯನ್ನು ಇನ್ನಷ್ಟುಪ್ರಮಾಣದಲ್ಲಿ ಷೇರುಪೇಟೆಯಲ್ಲಿ ಹೂಡುವ ಕುರಿತೂ ಬುಧವಾರದ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.