ಅರಣ್ಯದಲ್ಲಿ ವನ್ಯಜೀವಿ ಪರಿಪಾಲಕರಿಂದಲೇ ಪರಿಸರ ಮಾಲಿನ್ಯ!: ವೈರಲ್ ಆದ ಫೋಟೋಗಳು

Published : Oct 28, 2017, 01:39 PM ISTUpdated : Apr 11, 2018, 01:02 PM IST
ಅರಣ್ಯದಲ್ಲಿ ವನ್ಯಜೀವಿ ಪರಿಪಾಲಕರಿಂದಲೇ ಪರಿಸರ ಮಾಲಿನ್ಯ!: ವೈರಲ್ ಆದ ಫೋಟೋಗಳು

ಸಾರಾಂಶ

ಅರಣ್ಯದಲ್ಲಿ ವನ್ಯಜೀವಿ ಪರಿಪಾಲಕರಿಂದಲೇ ಮೋಜು ಮಸ್ತಿ ಮಾಡಿ ಪರಿಸರ ಮಾಲಿನ್ಯ ಮಾಡುತ್ತಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಒಂದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದಲ್ಲಿ ನಡೆದಿದೆ.

ಚಿಕ್ಕಮಗಳೂರು(ಅ.28): ಅರಣ್ಯದಲ್ಲಿ ವನ್ಯಜೀವಿ ಪರಿಪಾಲಕರಿಂದಲೇ ಮೋಜು ಮಸ್ತಿ ಮಾಡಿ ಪರಿಸರ ಮಾಲಿನ್ಯ ಮಾಡುತ್ತಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಒಂದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದಲ್ಲಿ ನಡೆದಿದೆ.

ವನ್ಯಜೀವಿ ಪರಿಪಾಲಕ ಸತೀಶ್ ಗೌಡ ಮತ್ತು ಅವರ ಸ್ನೇಹಿತರ ತಂಡ ಇತ್ತೀಚೆಗೆ ಮುತ್ತೋಡಿ ಪ್ರಕೃತಿ ಶಿಬಿರದ ಹೃದಯಭಾಗದಲ್ಲಿ ನ ಅಭಯಾರಣ್ಯದ ಸೋಮವಾಹಿನಿ ನದಿಯಲ್ಲಿ ಅಕ್ರಮವಾಗಿ ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ಇನ್ನೂ ಕೈಯಲ್ಲಿ ಹೆಂಡದ ಬಾಟಲಿಗಳನ್ನು ಹಿಡಿದು ಕುಡಿಯುತ್ತ, ಕುಣಿಯುತ್ತ, ನದಿಯಲ್ಲಿ ಕುರ್ಚಿ, ಮೇಜುಗಳನ್ನು ಹಾಕಿಕೊಂಡು ಕುಳಿತು ನಿರಾತಂಕವಾಗಿ ಮದ್ಯ ಸೇವಿಸುತ್ತಿರುವ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು , ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್