ಸಿದ್ದನ ಪರಿಸ್ಥಿತಿ ವೀಕ್ಷಣೆಗೆ ಚಿತ್ರನಟ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಆಗಮಿಸಿದ್ದರು. ಸಿದ್ದನ ಸ್ಥಿತಿ ಕಂಡು ದಯಾಮರಣ ಬೇಡ ಎಂದರು
ರಾಮನಗರ(ಅ.29): ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿರುವ ಸಿದ್ದನ ಸ್ಥಿತಿ ದಿನದಿಂದ ದಿನಕ್ಕೆ ಚೇತರಸಿಕೊಳ್ಳುತ್ತಿದೆ. ಇಂದು ತಕ್ಕಮಟ್ಟಿಗೆ ಆಹಾರ ತಿನ್ನುವಷ್ಟು ಸುಧಾರಿಸಿದೆ ಅಲ್ಲದೇ ರಾತ್ರಿ ನೀಡಿದ ಆಹಾರವನ್ನು ಜೀರ್ಣಿಸಿಕೊಂಡಿದೆ. ನಿಶ್ಯಕ್ತಿಯನ್ನು ದೂರ ಮಾಡಲು ವೈದ್ಯರು ೧೫ ಲೀಟರ್ ನಷ್ಟು ಗ್ಲೊಕೋಸ್ ಮಿಶ್ರಿತ ಎಲೆಕ್ಡೋ ಪವರ್ ಅರ್ಧದಷ್ಟು ಹಾಕಿದ್ದಾರೆ.
ಇನ್ನೂ ಸಿದ್ದನ ಪರಿಸ್ಥಿತಿ ವೀಕ್ಷಣೆಗೆ ಚಿತ್ರನಟ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಆಗಮಿಸಿದ್ದರು. ಸಿದ್ದನ ಸ್ಥಿತಿ ಕಂಡು ದಯಾಮರಣ ಬೇಡ ಎಂದರು