
ಐಜವಲ್: ದೇಶಾದ್ಯಂತ ಕಾಂಗ್ರೆಸ್-ಬಿಜೆಪಿ ಬದ್ಧ ವೈರಿಗಳಂತೆ ವರ್ತಿಸುತ್ತವೆ. ಆದರೆ ಮಿಜೋರಾಂನ ಚಕ್ಮಾ ಸ್ವಾಯತ್ತ ಜಿಲ್ಲಾ ಮಂಡಳಿ (ಸಿಎಡಿಸಿ) ಆಡಳಿತ ನಡೆಸಲು ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟಕ್ಕೆ ಬುಧವಾರ ಆಹ್ವಾನ ನೀಡಲಾಗಿದೆ.
ಬಾಂಗ್ಲಾ ಮತ್ತು ಮ್ಯಾನ್ಮಾರ್ ಗಡಿಭಾಗದ ಮಿಜೋರಾಂನಲ್ಲಿ ವಾಸಿಸುತ್ತಿರುವ ಚಕ್ಮಾ ಸಮುದಾಯದ ಜನರಿಗಾಗಿ ರಚಿಸಲಾಗಿರುವ ಸ್ವಾಯತ್ತೆ ಮಂಡಳಿ ಸಿಎಡಿಸಿ, ಯುನೈಟೆಡ್ ಶಾಸಕಾಂಗೀಯ ಪಕ್ಷ (ಯುಎಲ್ಪಿ) ಕ್ಕೆ ಕಾರ್ಯನಿರ್ವಾಹಕ ಸಮಿತಿ ರಚಿಸುವಂತೆ ರಾಜ್ಯಪಾಲ ಲೆ.ಜ. ನಿರ್ಭಯ್ ಶರ್ಮಾ ಆಹ್ವಾನ ನೀಡಿದ್ದಾರೆ.
ಯುಎಲ್ಪಿ ನಾಯಕರಾಗಿ ಬಿಜೆಪಿಯ ಶಾಂತಿ ಜಿಬನ್ ಚಕ್ಮಾರ ಆಯ್ಕೆ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಸದಸ್ಯರ ನೇಮಕಕ್ಕೆ ಸಲ್ಲಿಸಲಾಗಿರುವ ಮನವಿಯನ್ನು ಶರ್ಮಾ ಒಪ್ಪಿದ್ದಾರೆ. 20 ಸದಸ್ಯರ ಮಂಡಳಿಗೆ ಏ.20 ರಂದು ನಡೆದ ಚುನಾವಣೆಯಲ್ಲಿ ಎಂಎನ್ಎಫ್ 8, ಬಿಜೆಪಿ 6, ಕಾಂಗ್ರೆಸ್ 5 ಸ್ಥಾನ ಪಡೆದು ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.