ಹಿರಿಯರಿಗೆ ಕೇಂದ್ರ ಸರ್ಕಾರದ ಅಭಯ

Published : May 03, 2018, 10:32 AM IST
ಹಿರಿಯರಿಗೆ ಕೇಂದ್ರ ಸರ್ಕಾರದ ಅಭಯ

ಸಾರಾಂಶ

ಪ್ರಧಾನಮಂತ್ರಿ ವಯೋ ವಂದನಾ (ಪಿಎಂವಿವಿವೈ) ಯೋಜನೆಯಡಿ ಹಿರಿಯ ನಾಗರಿಕರು ಹೂಡಿಕೆ ಮಾಡಬಹುದಾದ 7.5 ಲಕ್ಷ ರು. ಮಿತಿಯನ್ನು ಕೇಂದ್ರ ಸರ್ಕಾರ 15 ಲಕ್ಷ ರು.ಗೆ ಏರಿಕೆ ಮಾಡಿದೆ. 

ನವದೆಹಲಿ: ಪ್ರಧಾನಮಂತ್ರಿ ವಯೋ ವಂದನಾ (ಪಿಎಂವಿವಿವೈ) ಯೋಜನೆಯಡಿ ಹಿರಿಯ ನಾಗರಿಕರು ಹೂಡಿಕೆ ಮಾಡಬಹುದಾದ 7.5 ಲಕ್ಷ ರು. ಮಿತಿಯನ್ನು ಕೇಂದ್ರ ಸರ್ಕಾರ 15 ಲಕ್ಷ ರು.ಗೆ ಏರಿಕೆ ಮಾಡಿದೆ. 
ಇದು ಹಿರಿಯ ನಾಗರಿಕರು ತಿಂಗಳಿಗೆ 10 ಸಾವಿರ ರು. ವರೆಗೂ ಪಿಂಚಣಿ ಪಡೆಯಲು ಅನುವಾಗಲಿದೆ. ಈ ಯೋಜನೆಯಡಿ 10 ವರ್ಷಗಳಿಗೆ ವಾರ್ಷಿಕ 8ರಷ್ಟು ಬಡ್ಡಿ ನಿಗದಿಪಡಿಸಲಾಗಿದ್ದು, ಇದನ್ನು ಹಿರಿಯ ನಾಗರಿಕರು ಪ್ರತಿ ತಿಂಗಳು, ಮೂರು ತಿಂಗಳು ಅಥವಾ 6 ತಿಂಗಳಿಗೊಮ್ಮೆ ಪಿಂಚಣಿಯಾಗಿ ಪಡೆಯಬಹುದಾಗಿದೆ.

ಇತರೆ ಹೂಡಿಕೆ ಯೋಜನೆಗಳು ಇತ್ತೀಚೆಗೆ ಕಡಿಮೆ ಆದಾಯ ನೀಡುತ್ತಿರುವ ಕಾರಣ ಪಿಂಚಣಿಯನ್ನೇ ನಂಬಿದ್ದ ಹಿರಿಯ ನಾಗರಿಕರು ಸಂಕಷ್ಟ ಎದುರಿಸುವಂತಾಗಿತ್ತು. ಹೀಗಾಗಿ ಕನಿಷ್ಠ ಶೇ.೮ರಷ್ಟು ಬಡ್ಡಿ ನೀಡುವ ಯೋಜನೆ ಜಾರಿಗೊಳಿಸಲಾಗಿತ್ತು. 
ಆದರೆ 7.5 ಲಕ್ಷ ರು. ಹಣದ ಮಿತಿ ಹಾಕಿದ್ದ ಕಾರಣ, ಹೆಚ್ಚಿನ ಪಿಂಚಣಿ ಪಡೆಯುವುದು ಸಾಧ್ಯವಿರಲಿಲ್ಲ. ಇದೀಗ ಹೂಡಿಕೆ ಮಿತಿಯನ್ನು 15 ಲಕ್ಷ ರು.ಗೆ ಏರಿಸುವ ಕಾರಣ ಹಿರಿಯ ನಾಗರಿಕರು ಮಾಸಿಕ 10000 ರು.ವರೆಗೆ ಪಿಂಚಣಿ ಪಡೆಯಬಹುದಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹೂಡಿಕೆಮಾಡಲು ಈ ಹಿಂದೆ ನಿಗದಿ ಮಾಡಲಾಗಿದ್ದ 2018 ರ ಮೇ 4ರ ಗಡುವನ್ನು 2020 ರ ಮಾ.31ರವರೆಗೂ ವಿಸ್ತರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ