
ಚಂಡೀಗಢ(ಡಿ.17): ಚಂಡೀಗಢದ ಟೈಲರ್ ಒಬ್ಬನ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಅಕ್ಷರಶಃ ಶಾಕ್ ಆಗಿದೆ. ಟೈಲರ್ ಬಳಿ ಬರೋಬ್ಬರಿ 30 ಲಕ್ಷ ರೂಪಾಯಿಯಷ್ಟು ಹೊಸ ನೋಟು ಮತ್ತು 2.5 ಕೆ.ಜಿ ಬಂಗಾರ ಸಿಕ್ಕಿದೆ. ಮೊಹಾಲಿಯಲ್ಲಿ ಜವಳಿ ಉದ್ಯಮಿ ಬಳಿ 2.19 ಕೋಟಿ ರೂಪಾಯಿ ಹೊಸ ನೋಟು ವಶಪಡಿಸಿಕೊಂಡ ಮಾರನೇ ದಿನವೇ ಈ ದಾಳಿ ನಡೆದಿದೆ.
ವಶಪಡಿಸಿಕೊಂಡ ಹಣದಲ್ಲಿ 18 ಲಕ್ಷ ರೂಪಾಯಿಯಷ್ಟು 2000 ರೂಪಾಯಿಯ ಹೊಸ ನೋಟುಗಳು, ಉಳಿದದ್ದು 100 ಮತ್ತು 50 ರೂಪಾಯಿಯ ನೋಟುಗಳಾಗಿವೆ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಇಡಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.