ಗಣಪತಿ ಆತ್ಮಹತ್ಯೆ ಕೇಸ್'ಗೆ ಟ್ವಿಸ್ಟ್? ಪ್ರಕರಣಕ್ಕೆ ಮತ್ತೆ ಜೀವ

Published : Apr 03, 2017, 08:09 AM ISTUpdated : Apr 11, 2018, 12:44 PM IST
ಗಣಪತಿ ಆತ್ಮಹತ್ಯೆ ಕೇಸ್'ಗೆ ಟ್ವಿಸ್ಟ್? ಪ್ರಕರಣಕ್ಕೆ ಮತ್ತೆ ಜೀವ

ಸಾರಾಂಶ

ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದ ಬಿ ರಿಪೋರ್ಟ್'ಗೆ ತಕರಾರು ಸಲ್ಲಿಸಲು ಮಡಿಕೇರಿ ಜೆಎಂಎಫ್​'ಸಿ ಕೋರ್ಟ್​ ಅವಕಾಶ ನೀಡಿದ್ದು, ಅರ್ಜಿ ವಿಚಾರಣೆಯನ್ನ ಏಪ್ರಿಲ್ 10 ಕ್ಕೆ‌ ನಿಗದಿ ಮಾಡಿದೆ.

ಮಡಿಕೇರಿ(ಏ. 03): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಿಗಳಿಗೆ ಮತ್ತೆ ಕಂಟಕ ಎದುರಾಗಿದೆ. ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಪುತ್ರ ನೇಹಲ್​ ಖಾಸಗಿ ದೂರು ದಾಖಲಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಇಂದು ಕೋರ್ಟ್​ ಸಮ್ಮತಿಸಿದೆ. 

ಸಿಐಡಿ ಅಧಿಕಾರಿಗಳು ಸಲ್ಲಿಸಿದ್ದ ಬಿ ರಿಪೋರ್ಟ್'ಗೆ ತಕರಾರು ಸಲ್ಲಿಸಲು ಮಡಿಕೇರಿ ಜೆಎಂಎಫ್​'ಸಿ ಕೋರ್ಟ್​ ಅವಕಾಶ ನೀಡಿದ್ದು, ಅರ್ಜಿ ವಿಚಾರಣೆಯನ್ನ ಏಪ್ರಿಲ್ 10 ಕ್ಕೆ‌ ನಿಗದಿ ಮಾಡಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಚಿವ ಕೆ.ಜೆ ಜಾರ್ಜ್​, ಐಪಿಎಸ್​ ಅಧಿಕಾರಿಗಳಾದ ಪ್ರಣಬ್​ ಮೊಹಾಂತಿ ಮತ್ತು ಎ.ಎಂ ಪ್ರಸಾದ್​ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಚಿವ ಜಾರ್ಜ್ ರಾಜೀನಾಮೆಯನ್ನೂ ನೀಡಿದ್ದರು. ಆದರೆ, ಸರಿಯಾಗಿ ಸಾಕ್ಷ್ಯಾಧಾರ ಇಲ್ಲವೆಂದು ಹೇಳಿ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದ್ದರಿಂದ ಪ್ರಕರಣ ಅಂತ್ಯವಾಗಿತ್ತು. ಜಾರ್ಜ್ ಸೇರಿದಂತೆ ಹಲವು ಮಂದಿ ಆರೋಪಮುಕ್ತರಾದರು. ಆನಂತರ ಜಾರ್ಜ್ ಮತ್ತೆ ಸಂಪುಟ ಸೇರಿಕೊಂಡಿದ್ದಾರೆ. ಇದೀಗ, ಗಣಪತಿ ಪುತ್ರನ ಮೂಲಕ ಪ್ರಕರಣಕ್ಕೆ ಮರುಜೀವ ಬಂದಿದೆ. ನ್ಯಾಯಾಲಯ ಮುಂದೇನು ತೀರ್ಮಾನಿಸುತ್ತದೆ ಎಂಬುದನ್ನು ಕಾದುನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!