
ಬೆಂಗಳೂರು (ನ.24): ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ನ್ಯಾ.ಕೆ.ಎನ್.ಕೇಶವ ನಾರಾಯಣ ಆಯೋಗದ ಕಚೇರಿಗೆ ಬಂದಿರುವ ಸಿಬಿಐ ತಂಡ ಆಯೋಗ ಕಲೆ ಹಾಕಿರುವ ಮಾಹಿತಿ ಪಡೆದಿದೆ.
ಚೆನ್ನೈ'ನಿಂದ ಆಗಮಿಸಿದ ಮೂವರು ಅಧಿಕಾರಿಗಳ ತಂಡ ಈಗಾಗಲೇ ವಿಚಾರಣೆ ಮುಕ್ತಾಯಗೊಳಿಸಿ ವರದಿ ಸಿದ್ದಗೊಳಿಸುತ್ತಿದೆ. ಆಯೋಗ 49 ಮಂದಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ.
ಸುಮಾರು 3 ಗಂಟೆಗಳಿಂದ ನ್ಯಾ.ಕೇಶವ ನಾರಾಯಣ ಅವರಿಂದ ಸಿಬಿಐ ತಂಡ ಮಾಹಿತಿ ಪಡೆದಿದೆ. ಕಳೆದ ವಾರವೇ ನೋಟಿಸ್ ನೀಡಿ ಮಾಹಿತಿ ನೀಡುವಂತೆ ಸಿಬಿಐ ಕೋರಿತ್ತು. ಆಯೋಗ ನೀಡಿರುವ ಮಾಹಿತಿ ಸಿಬಿಐ ತನಿಖೆ ಸಹಕಾರಿಯಾಗಲಿದೆ. ಆಯೋಗ ನೀಡಿದ ಮಾಹಿತಿ ಆಧರಿಸಿ ಮತ್ತೆ ತನಿಖಾಧಿಕಾರಿಗಳ ವಿಚಾರಣೆ ಒಳಪಡಿಸುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.