ಸಿಬಿಐಯಿಂದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು

Published : Nov 24, 2017, 04:53 PM ISTUpdated : Apr 11, 2018, 12:57 PM IST
ಸಿಬಿಐಯಿಂದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕು

ಸಾರಾಂಶ

ಡಿವೈಎಸ್ಪಿ  ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ  ಚುರುಕುಗೊಳಿಸಿದೆ.  ನ್ಯಾ.ಕೆ.ಎನ್.ಕೇಶವ ನಾರಾಯಣ ಆಯೋಗದ ಕಚೇರಿಗೆ ಬಂದಿರುವ ಸಿಬಿಐ ತಂಡ  ಆಯೋಗ ಕಲೆ ಹಾಕಿರುವ ಮಾಹಿತಿ ಪಡೆದಿದೆ.  

ಬೆಂಗಳೂರು (ನ.24): ಡಿವೈಎಸ್ಪಿ  ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ  ಚುರುಕುಗೊಳಿಸಿದೆ.  ನ್ಯಾ.ಕೆ.ಎನ್.ಕೇಶವ ನಾರಾಯಣ ಆಯೋಗದ ಕಚೇರಿಗೆ ಬಂದಿರುವ ಸಿಬಿಐ ತಂಡ  ಆಯೋಗ ಕಲೆ ಹಾಕಿರುವ ಮಾಹಿತಿ ಪಡೆದಿದೆ.  

ಚೆನ್ನೈ'ನಿಂದ ಆಗಮಿಸಿದ ಮೂವರು ಅಧಿಕಾರಿಗಳ ತಂಡ ಈಗಾಗಲೇ ವಿಚಾರಣೆ ಮುಕ್ತಾಯಗೊಳಿಸಿ ವರದಿ ಸಿದ್ದಗೊಳಿಸುತ್ತಿದೆ.  ಆಯೋಗ 49 ಮಂದಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ.

ಸುಮಾರು 3 ಗಂಟೆಗಳಿಂದ ನ್ಯಾ.ಕೇಶವ ನಾರಾಯಣ ಅವರಿಂದ ಸಿಬಿಐ ತಂಡ ಮಾಹಿತಿ ಪಡೆದಿದೆ.  ಕಳೆದ ವಾರವೇ ನೋಟಿಸ್ ನೀಡಿ ಮಾಹಿತಿ ನೀಡುವಂತೆ ಸಿಬಿಐ ಕೋರಿತ್ತು.   ಆಯೋಗ ನೀಡಿರುವ ಮಾಹಿತಿ ಸಿಬಿಐ ತನಿಖೆ ಸಹಕಾರಿಯಾಗಲಿದೆ. ಆಯೋಗ ನೀಡಿದ ಮಾಹಿತಿ ಆಧರಿಸಿ ಮತ್ತೆ ತನಿಖಾಧಿಕಾರಿಗಳ ವಿಚಾರಣೆ ಒಳಪಡಿಸುವ ಸಾಧ್ಯತೆ ಇದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
‘ಕಿಚ್ಚ’ಬ್ಬಿಸಿದ ಯುದ್ಧ: ತೇಪೆ, ಬೆಣ್ಣೆ ಹಚ್ಚಿದರೂ ನಿಲ್ಲುತ್ತಿಲ್ಲ!