
ಬೆಂಗಳೂರು(ಅ.28): ಕುಡಿದ ಮತ್ತಿನಲ್ಲಿ ಌಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಌಮಬುಲೆನ್ಸ್ ಚಾಲಕನೊಬ್ಬ ಬೆಂಗಳೂರು ಪೊಲೀಸರಿಗೆ ತಗಲಾಕ್ಕೊಂಡಿದ್ದಾನೆ.
ನಿನ್ನೆ ರಾತ್ರಿ ಕೆ. ಆರ್ .ಪುರಂನ ಸತ್ಯಸಾಯಿ ಅರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಗೆ ಸೇರಿದ ಌಂಬುಲೆನ್ಸನ್ನು ಚಾಲಕ ಕುಡಿದ ಮತ್ತಿನಲ್ಲಿ ಓಡಿಸುತ್ತಿದ್ದ. ಮಡಿಕೇರಿಯಿಂದ ಬೆಂಗಳೂರಿಗೆ ಬರುವ ವೇಳೆ ಬಿಡದಿ ಬಳಿ ಚಾಲಕ ಮಹೇಶ್ ಡ್ರಿಂಕ್ಸ್ ಮಾಡಿದ್ದಾನೆ. ಕುಡಿದು ಸೈರನ್ ಬಳಸಿಕೊಂಡು ಆಂಬುಲೆನ್ಸ್'ನಲ್ಲಿ ಬರುತ್ತಿದ್ದವನನ್ನು ಹಲಸೂರು ಗೇಟ್ ಪೊಲೀಸರು ತಪಾಸಣೆ'ಗೆ ಒಳಪಡಿಸಿದಾಗ ಸಿಕ್ಕಿಬಿದ್ದಿದ್ದಾನೆ.
ಪೊಲೀಸರು ಚಾಲಕ ಮಹೇಶ್'ನನ್ನ ದಂಡ ಕಟ್ಟಿ ಮನೆಗೆ ಹೋಗುವಂತೆ ಹೇಳಿದ್ರು. ಆದ್ರೆ ಊಟಕ್ಕೆ ಹಣವಿಲ್ಲ ಎಂದು ಚಾಲಕ ಗೋಗರೆದಾಗ ಇನ್ಸ್'ಪೆಕ್ಟರ್ ಮಹಮ್ಮದ್ 100 ರೂಪಾಯಿ ಕೊಟ್ಟು ಊಟ ಕೊಡಿಸಿ, ಚಾಲಕ ಮಹೇಶ್ ಹಾಗೂ ಌಂಬುಲೆನ್ಸನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.