ನಾಯಿ ಬೊಗಳಿದ್ದಕ್ಕಾಗಿ ಯುವಕರ ನಡುವೆ ಜಗಳ; ಓರ್ವನ ಸ್ಥಿತಿ ಗಂಭೀರ

Published : Feb 21, 2018, 01:06 PM ISTUpdated : Apr 11, 2018, 01:08 PM IST
ನಾಯಿ ಬೊಗಳಿದ್ದಕ್ಕಾಗಿ ಯುವಕರ ನಡುವೆ ಜಗಳ; ಓರ್ವನ ಸ್ಥಿತಿ ಗಂಭೀರ

ಸಾರಾಂಶ

ನಾಯಿ ಬೊಗಳಿದ್ದಕ್ಕಾಗಿ ಯುವಕರ ‌ಮದ್ಯೆ ನಡೆದ ಜಗಳದಿಂದ  ಯುವಕನೊಬ್ಬ ಕೋಮಾ ಸ್ಥಿತಿ ತಲುಪಿದ್ದಾನೆ.  

ಬಾಗಲಕೋಟೆ (ಫೆ.21): ನಾಯಿ ಬೊಗಳಿದ್ದಕ್ಕಾಗಿ ಯುವಕರ ‌ಮದ್ಯೆ ನಡೆದ ಜಗಳದಿಂದ  ಯುವಕನೊಬ್ಬ ಕೋಮಾ ಸ್ಥಿತಿ ತಲುಪಿದ್ದಾನೆ.  

ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಚಿರಂಜೀವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಿನ್ನೆ ರಾತ್ರಿ ವಿನಾಯಕ ಎಂಬಾತನಿಂದ ಚಿರಂಜೀವಿ ತೀವ್ರವಾಗಿ ಹಲ್ಲೆಗೊಳಗಾಗಿದ್ದಾನೆ.   

ವಿನಾಯಕ ಎಂಬಾತನಿಗೆ ಸೇರಿದ ನಾಯಿ ಬೊಗಳಿದ್ದಕ್ಕಾಗಿ ರಾತ್ರಿ 10.30 ರ ವೇಳೆ ಜಗಳ ನಡೆದಿತ್ತು. ಜಗಳದಲ್ಲಿ ವಿನಾಯಕ ಬಡಿಗೆಯಿಂದ ಚಿರಂಜೀವಿ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆ ಕುರಿತು ಕೆರೂರ ಠಾಣಾ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬನ್ನೇರುಘಟ್ಟದಲ್ಲಿ ಅಪರೂಪದ ಅತಿಥಿ, ಆಫ್ರಿಕಾದಿಂದ ಆಗಮಿಸಿದ ಕ್ಯಾಪುಚಿನ್ ಕೋತಿಗಳು!
ದೇಶದಲ್ಲಿ ದಯನೀಯ ಸ್ಥಿತಿಗಿಳಿದ ಅನ್ನದಾತ, ಸಾಲ ಮರುಪಾವತಿಸಲು ಕಿಡ್ನಿ ಮಾರಿದ ರೈತ!