
ತಂಜಾವೂರು : ನಾಯಿ ನಿಯತ್ತಿಗಿಂತ ಮಿಗಿಲಾಗಿರುವುದು ಯಾವುದು ಇಲ್ಲ. ಮನುಷ್ಯನೊಂದಿಗೆ ಸದಾ ಸ್ನೇಹ, ನಿಯತ್ತಿನೊಂದಿಗೆ ಬದುಕುವ ಜೀವಿ ಇದು.
ಅದೇ ರೀತಿ ತಮಿಳುನಾಡಿನಲ್ಲಿ ನಾಯಿ ನಿಯತ್ತಿಗೆ ಸಾಕ್ಷಿಯಾದ ಮನಕಲುಕುವ ಘಟನೆಯೊಂದು ನಡೆದಿದೆ. ನಾಯಿ ಹಾವಿನೊಂದಿಗೆ ಹೋರಾಡಿ ತನ್ನ ಮಾಲಿಕನ ಜೀವ ಕಾಪಾಡಿದೆ ಹಾವು ಕಡಿದಿದ್ದು, ಈ ವೇಳೆ ಹಾವಿನಿಂದ ತನ್ನ ಮಾಲೀಕರನ್ನು ಕಾಪಾಡಿದೆ.
ತಮಿಳುನಾಡಿನ ವೆಂಗರಾಯನ ಕುಡಿಕಾಡು ಪ್ರದೇಶದ ರೈತ 50 ವರ್ಷದ ನಟರಾಜು ಬೆಳ್ಳಂಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಗರ ಹಾವೊಂದು ಸ್ಥಳದಲ್ಲಿತ್ತು. ಹಾವು ಹೆಡೆ ಬಿಚ್ಚಿ ನಟರಾಜನ್ ಗೆ ಕಚ್ಚಲು ಯತ್ನಿಸಿದೆ. ಈ ವೇಳೆ ತಕ್ಷಣ ನಾಯಿ ಅಡ್ಡ ಬಂದು ಬೊಗಳಲಾರಂಭಿಸಿದೆ.
ಈ ವೇಳೆ ನಟರಾಜನ್ ಹಿಂದೆ ಸರಿದಿದ್ದು, ನಾಯಿಗೆ ಕಾವು ಕಚ್ಚಿದ್ದು, ಮಾಲೀಕನ ಕಾಪಾಡಿ ತನ್ನ ಪ್ರಾಣ ತ್ಯಾಗ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.