ಖಡ್ಗ, ಧಾರಾವಾಹಿ, ಜಯಂತಿ.. ಎಚ್‌ಡಿಕೆ ಟಿಪ್ಪು ಜಯಂತಿಯಿಂದ ದೂರವಿರಲು ಇದೆ ಕಾರಣ!

Published : Nov 09, 2018, 07:12 PM IST
ಖಡ್ಗ, ಧಾರಾವಾಹಿ, ಜಯಂತಿ.. ಎಚ್‌ಡಿಕೆ ಟಿಪ್ಪು ಜಯಂತಿಯಿಂದ ದೂರವಿರಲು ಇದೆ ಕಾರಣ!

ಸಾರಾಂಶ

ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಅಧಿಕೃತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಜಾರಿಯಾದ ಕಾರ್ಯಕ್ರಮ ಹಲವು ವಿವಾದಗಳ ನಡುವೆಯೂ ಮುಂದುವರಿದುಕೊಂಡೆ ಇದೆ. ಹಾಗಾದರೆ ಸಿಎಂ ಹಿಂದಕ್ಕೆ ಸರಿಯಲು ಅಸಲಿ ಕಾರಣ ಏನು?

ಬೆಂಗಳೂರು[ನ.09]  ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಸರ್ಕಾರದ ಟಿಪ್ಪು ಜಯಂತಿ ಆಚರಣೆಯಿಂದ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ ಅಂತರ ಕಾಪಾಡಿಕೊಳ್ಳಲು ನಿರ್ಧರಿಸಿದ್ದು, ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಅಧಿಕೃತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.

ಇದರ ಹಿಂದೆ ಬೇರೆಯ ಯೋಚನೆ ಇದೆಯೇ? ಸೋಶಿಯಲ್ ಮೀಡಿಯಾ ಹೇಳುತ್ತಿರುವುದೆ ಬೇರೆ.. ಟಿಪ್ಪುವಿನ ಹಿಂದೆ ಹೋದವರು ಎಲ್ಲರೂ ಸೋತಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಹೋದರೂ ಅವರಿಗೂ ಸೋಲಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಸಂಜಯ್ ಖಾನ್: ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದ ಸಂಜಯ್ ಖಾನ್ ಅವರ ಸ್ಟುಡಿಯೋ ಕ್ಕೆ ಬೆಂಕಿ ಬಿತ್ತು. ಸಂಜಯ್ ಖಾನ್ ಸಹ ಕೈ ಸುಟ್ಟುಕೊಂಡಿದ್ದರು.ಪ್ರಕರಣದಲ್ಲಿ  42 ಜನ ಸಾವಿಗೀಡಾಗಿ 25 ಜನ ಗಂಭೀರ ಗಾಯಗೊಂಡಿದ್ದರು. ಇದು 1989ರ ಪ್ರಕರಣ

ವಿಜಯ್ರ ಮಲ್ಯ: ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ್ದು ಎಂಬ ಖಡ್ಗ ತಂದ ವಿಜಯ್ ಮಲ್ಯ ಮಾಧ್ಯಮಗಳಲ್ಲಿ ಸಖತ್ ಪ್ರಚಾರ ಪಡೆದುಕೊಂಡಿದ್ದರು. ಆದರೆ ಈಗ ಆರ್ಥಿಕ ಅಪರಾಧಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ.

ಯಡಿಯೂರಪ್ಪಗೂ ಛಾಟಿ: ಬಿಜೆಪಿಯನ್ನು ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಟಿಪ್ಪು ಕೊಂಡಾಡಿದ್ದರು. ನಂತರ ಬಿಜೆಪಿಗೆ ಬಂದು ಅಧ್ಯಕ್ಷರಾಗಿ ವಿಧಾನಸಭೆ ಚುವಾವಣೆ ಎದುರಿಸಿ ಕೇವಲ ಒಂದು ದಿನದ ಮುಖ್ಯಮಂತ್ರಿಯಾದರು.

ಸಿದ್ದರಾಮಯ್ಯ: ಟಿಪ್ಪು ಜಯಂತಿಯನ್ನು ಅಧಿಕೃತ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಆದರೆ ಸಿದ್ದರಾಮಯ್ಯ 2018ರ ಚುನಾವಣೆ ಫಲಿತಾಂಶದ ನಂತರ ಹಿಂದಕ್ಕೆ ಸರಿಯಬೇಕಾಯಿತು. ಅವರ ಬೆಂಬಲಿಗರನ್ನು ಮೂಲೆಗುಂಪು ಮಾಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ
ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೈಹಿಡಿದ SOS