ಬಯಲಾಯ್ತು ಶಾಸಕ ಹ್ಯಾರಿಸ್ ಮತ್ತೊಂದು ಭಾರಿ ಕುತಂತ್ರ..!

By Suvarna Web DeskFirst Published Mar 17, 2018, 10:37 AM IST
Highlights

ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ಮೆರೆದು ಮಗ ಜೈಲು ಸೇರಿದರೂ ಅಪ್ಪನಿಗೆ ಇನ್ನೂ ಬುದ್ದಿ ಬಂದಂತೆ ಕಾಣುತ್ತಿಲ್ಲ. ಮಗನಿಗೆ ಜಾಮೀನು ಸಿಗಲಿಲ್ಲ ಅನ್ನೋ ಕಾರಣ ಆತನ ಜೊತೆ ಇದ್ದವರೂ ಹೊರಗೆ ಬರಲಿಕ್ಕೆ ಹ್ಯಾರಿಸ್​ ಅಡ್ಡಿ ಆಗಿದ್ದಾರಾ ಅನ್ನೋ ಆರೋಪ ಕೇಳಿ ಬಂದಿದೆ.

ಬೆಂಗಳೂರು : ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ಮೆರೆದು ಮಗ ಜೈಲು ಸೇರಿದರೂ ಅಪ್ಪನಿಗೆ ಇನ್ನೂ ಬುದ್ದಿ ಬಂದಂತೆ ಕಾಣುತ್ತಿಲ್ಲ. ಮಗನಿಗೆ ಜಾಮೀನು ಸಿಗಲಿಲ್ಲ ಅನ್ನೋ ಕಾರಣ ಆತನ ಜೊತೆ ಇದ್ದವರೂ ಹೊರಗೆ ಬರಲಿಕ್ಕೆ ಹ್ಯಾರಿಸ್​ ಅಡ್ಡಿ ಆಗಿದ್ದಾರಾ ಅನ್ನೋ ಆರೋಪ ಕೇಳಿ ಬಂದಿದೆ.

ಈ ಸುದ್ದಿ ಬೆನ್ನತ್ತಿದ ಸುವರ್ಣ ನ್ಯೂಸ್​​ ಪೂರಕ ಸಾಕ್ಷ್ಯಗಳು ಸಿಕ್ಕಿವೆ. ಅಸಲಿ ವಿಷಯ ಏನಂದರೆ ನಲಪಾಡ್ ನ ಇತರ 6 ಮಂದಿ ಆರೋಪಿಗಳು ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿಯೇ ಇಲ್ಲ. ಯಾಕಂದ್ರೆ, ಆರೋಪಿಗಳ ಅರ್ಜಿ ಸಲ್ಲಿಸೋಕೆ ಹ್ಯಾರಿಸ್​​​​​​​ ಅಡ್ಡಿಯಾಗಿದ್ದಾರೆ ಅನ್ನೋ ಮಾಹಿತಿ ಸುವರ್ಣ ನ್ಯೂಸ್​ಗೆ ಸಿಕ್ಕಿದೆ.

ಸೆಷನ್ಸ್​​ ಕೋರ್ಟ್​​ನಲ್ಲಿಯೂ ಇದೇ ಹ್ಯಾರಿಸ್​ ಎಲ್ಲಾ ಆರೋಪಿಗಳಿಗೂ ಅರ್ಜಿ ಹಾಕಿಸಿದ್ರು. ಆದ್ರೆ ಹೈಕೋರ್ಟ್​ನಲ್ಲಿ ತನ್ನ ಮಗನಿಗೆ ಜಾಮೀನು ಸಿಗದೇ ಇದ್ದರೂ, ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿ ಬಿಡುತ್ತೆ.

ಹೀಗಾಗಿ ತನ್ನ ಮಗ ಹೊರಗೆ ಬರುವವರೆಗೆ ಯಾರಿಗೂ ಜಾಮೀನು ಸಿಗೋದು ಬೇಡ ಅಂತ, ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಅಡ್ಡಗಾಲು ಹಾಕಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.

ಈ ಸುದ್ದಿಯನ್ನ ಬೆನ್ನತ್ತಿ ಸುವರ್ಣ ನ್ಯೂಸ್​ ಇತರ ಆರೋಪಿಗಳ ಅಡ್ರೆಸ್​ ಹುಡುಕಿಕೊಂಡು ಹೊರಟಿತ್ತು. ಆಸ್ಟಿಂಗ್​ ಟೌನ್​​ 6ನೇ ಕ್ರಾಸ್​ನಲ್ಲಿ ನದೀಂ ಅಲಿ ಬಿಲ್ಡಿಂಗ್​ ಅರುಣ್​ ಬಾಬು ಹಾಗೂ ಮೊಹಮದ್​ ಅಪ್ರಾಸ್​​ ಅವರ ಅಡ್ರೆಸ್​. ಇದು ತನಿಖೆ ವೇಳೆ ಪೊಲೀಸರಿಗೆ ನೀಡಿರುವ ವಿಳಾಸ. ಅಲ್ಲಿಗೆ ಹೋದ ಸುವರ್ಣ ನ್ಯೂಸ್​ ತಂಡಕ್ಕೆ ಮತ್ತೊಂದು ಶಾಕಿಂಗ್​ ನ್ಯೂಸ್​ ಕಾದಿತ್ತು.

click me!