ಕಾರ್ಗಿಲ್ ಹುತಾತ್ಮನ ಪುತ್ರಿಗೆ ಮನವಿ ಮಾಡಿದ ಪಠಾಣ್’ಕೋಟ್ ಹುತಾತ್ಮನ ಪುತ್ರಿ

Published : Mar 03, 2017, 12:16 PM ISTUpdated : Apr 11, 2018, 01:12 PM IST
ಕಾರ್ಗಿಲ್ ಹುತಾತ್ಮನ ಪುತ್ರಿಗೆ ಮನವಿ ಮಾಡಿದ ಪಠಾಣ್’ಕೋಟ್ ಹುತಾತ್ಮನ ಪುತ್ರಿ

ಸಾರಾಂಶ

ತನ್ನ ತಂದೆಯ ತ್ಯಾಗವನ್ನು ಅವಮಾನಿಸಬೇಡಿ. ದೇಶ ಹಾಗೂ ಇಲ್ಲಿನ ಜನರಿಗಾಗಿ ತಮ್ಮ ಪ್ರಾಣವನ್ನು ಕೊಟ್ಟಿರುವವರನ್ನು ಟೀಕಿಸಬೇಡಿ, ಎಂದು ಪೂಜಾ ಹೇಳಿದ್ದಾರೆ.

ನವದೆಹಲಿ (ಮಾ.03): ತನ್ನ ತಂದೆಯ ತ್ಯಾಗ-ಬಲಿದಾನಗಳಿಗೆ ಅವಮಾನ ಮಾಡದಿರುವಂತೆ ಕಾರ್ಗಿಲ್ ಹುತಾತ್ಮ ಪುತ್ರಿ ಗುರ್’ಮೆಹರ್ ಸಿಂಗ್’ಗೆ ಪಠಾಣ್’ಕೋಟ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಲ್ಯಾನ್ಸ್’ನಾಯಕ್ ಮೂಲ್’ರಾಜ್ ಅವರ ಪುತ್ರಿ ಪೂಜಾ ಮನವಿ ಮಾಡಿಕೊಂಡಿದ್ದಾರೆ.

ತನ್ನ ತಂದೆಯ ತ್ಯಾಗವನ್ನು ಅವಮಾನಿಸಬೇಡಿ. ದೇಶ ಹಾಗೂ ಇಲ್ಲಿನ ಜನರಿಗಾಗಿ ತಮ್ಮ ಪ್ರಾಣವನ್ನು ಕೊಟ್ಟಿರುವವರನ್ನು ಟೀಕಿಸಬೇಡಿ, ಎಂದು ಪೂಜಾ ಹೇಳಿದ್ದಾರೆ.

ಏಬಿವಿಪಿಯ ವಿರುದ್ಧ ಗುರ್’ಮೆಹರ್ ಪ್ರತಿಭಟನಾ ಹೇಳಿಕೆಯು ಕಳೆದ ವಾರದಿಂದ ವೈರಲ್ ಆಗಿದ್ದು, ದೇಶಾದ್ಯಂತ ಚರ್ಚೆಗೆ ನಾಂದಿ ಹಾಡಿದೆ. ‘ಪಾಕಿಸ್ತಾನ ನನ್ನ ತಂದೆಯನ್ನು ಕೊಂದಿಲ್ಲ, ಬದಲಾಗಿ ಯುದ್ದವು ಕೊಂದಿದೆ’ ಎಂದು ಭಿತ್ತಿಪತ್ರ ಹಿಡಿದಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ