ಕೆಲವರು ಮುಂದೆ ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡ್ತಾರೆ :ಸಚಿವ ಡಿಕೆಶಿ ಅಂದಿದ್ದು ಯಾರ ವಿರುದ್ಧ ?

Published : Apr 17, 2017, 09:57 AM ISTUpdated : Apr 11, 2018, 12:51 PM IST
ಕೆಲವರು ಮುಂದೆ  ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡ್ತಾರೆ :ಸಚಿವ ಡಿಕೆಶಿ ಅಂದಿದ್ದು ಯಾರ ವಿರುದ್ಧ ?

ಸಾರಾಂಶ

 ಕೆಲವರು ನಾನು ಅಧ್ಯಕ್ಷ ಆಗಬೇಕೆಂದು ಬಯಸ್ತಾರೆ.ಇನ್ನೂ ಕೆಲವರು ನಾನು ಅಧ್ಯಕ್ಷ ಆಗೋದೇ ಬೇಡಾ ಅಂತಾರೆ.

ಬೆಂಗಳೂರು(ಏ.17): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ. ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕ್ಕೊಂಡು ಕುಳಿತಿಲ್ಲ.ಕೆಲವರು ಮುಂದೆ  ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡುತ್ತಾರೆ. ಕೆಲವರು ನಾನು ಅಧ್ಯಕ್ಷ ಆಗಬೇಕೆಂದು ಬಯಸ್ತಾರೆ.ಇನ್ನೂ ಕೆಲವರು ನಾನು ಅಧ್ಯಕ್ಷ ಆಗೋದೇ ಬೇಡಾ ಅಂತಾರೆ. ಅಧ್ಯಕ್ಷ ಸ್ಥಾನಕ್ಕಾಗಿ ಹೈಕಮಾಂಡ್ ಬಳಿ ಯಾವುದೇ ಕಾರಣಕ್ಕೂ ಹೋಗಲ್ಲ.

ಹೈಕಮಾಂಡ್ ಮತ್ತು ಸಿಎಂ ಕೊಟ್ಟ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ. ಯಾರಾದರೂ ಅಧ್ಯಕ್ಷರಾಗಲಿ, ನನಗೆ ಬೇಸರವಿಲ್ಲ. ನನ್ನ ನೇಮಕ ಬೇಡ ಎಂದು ಸಿಎಂ ಎಲ್ಲಿಯೂ ಹೇಳಿಲ್ಲ. ನಾನು ಅಧ್ಯಕ್ಷ ಆದರೆ ಸಿಎಂ ವಿರೋಧಿಸ್ತಾರೆ ಅನ್ನೋದು ಸುಳ್ಳು. ಎಲ್ಲರೂ ಒಪ್ಪಿದರೆ  ಅಧ್ಯಕ್ಷನಾಗಲು ಒಪ್ಪುವೆ, ಇಲ್ಲಾಂದ್ರೆ ಇಲ್ಲ. ಕೆಲವರು ನಾನು ಬಹಳ ಹಿರಿಯ ಎಂದು ಹೇಳಿಕೊಂಡು ಲಾಬಿ ನಡೆಸಿದ್ದಾರೆ ಎಂದು ಕೆ. ಹೆಚ್. ಮುನಿಯಪ್ಪ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೋಷಖಾನಾ–2 ಪ್ರಕರಣ: ಇಮ್ರಾನ್ ಖಾನ್–ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್!
ಶಕ್ತಿ ಯೋಜನೆ ಇದ್ದರೂ, ರಾಜ್ಯದ 1800 ಹಳ್ಳಿಗಳಿಗೆ ಇನ್ನೂ ಬಸ್ ಸಂಪರ್ಕವೇ ಇಲ್ಲ!