ನಾನು ಕನಕಪುರ ಬಂಡೆ,ಬಂಡೆಗೆ ತಲೆ ಚೆಚ್ಚಿಕೊಂಡ್ರೆ ತಲೆ ಒಡೆದು ಹೋಗುತ್ತೆ ಹುಶಾರ್

Published : Nov 07, 2017, 03:19 PM ISTUpdated : Apr 11, 2018, 01:09 PM IST
ನಾನು ಕನಕಪುರ ಬಂಡೆ,ಬಂಡೆಗೆ ತಲೆ ಚೆಚ್ಚಿಕೊಂಡ್ರೆ ತಲೆ ಒಡೆದು ಹೋಗುತ್ತೆ ಹುಶಾರ್

ಸಾರಾಂಶ

ನನ್ನ ಫೋನ್ ಕೂಡಾ ಕದ್ದಾಲಿಕೆ‌ ಆಗಿದೆ.‘ನಿತ್ಯ ನನ್ನನ್ನು ಫಾಲೋ ಮಾಡ್ತಿದ್ದಾರೆ, ಎಲ್ಲಿ ಹೋಗ್ತೀನಿ ಅತ್ತ ಹಿಂದೆ ಬಿದ್ದಿದ್ದಾರೆ’.

ಬೆಂಗಳೂರು(ನ.07): ಕೆಲ ಮಾಧ್ಯಮಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ಆದರೆ ಕೆಲವರು ಇಡಿ, ಸಿಬಿಐ ಅಂತ ಇಲ್ಲ ಸಲ್ಲದ ಸುದ್ದಿಗಳನ್ನು ಹಾಕ್ತಿದ್ದಾರೆ. ನಾನು‌ ಕನಕಪುರ ಬಂಡೆಯಿಂದ ಬಂದವನು.ಬಂಡೆಗೆ ತಲೆ ಚೆಚ್ಚಿಕೊಂಡ್ರೆ ತಲೆ ಒಡೆದು‌ ಹೋಗುತ್ತೆ ಹುಷಾರ್.ಇದಕ್ಕೆಲ್ಲ ನಾನು ಹೆದರೊಲ್ಲ'ಎಂದು ಮಾಧ್ಯಮಗಳ ಮೇಲೆ'  ಇಂದನ ಸಚಿವ ಡಿ.ಕೆ. ಶಿವಕುಮಾರ್ ಗರಂ ಆಗಿ ಮಾತನಾಡಿದರು.

ಐಟಿ ವಿಚಾರಣೆ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಐಟಿ ವಿಚಾರಣೆ ಬರೋದು‌ ಬೇಡ ಅಂತ ಹೇಳಿದರು. ಈ ಸಂದರ್ಭದಲ್ಲಿ ಫೋನ್ ಟ್ಯಾಪ್ ಬಗ್ಗೆ ಮಾತನಾಡಿ,‘ನನ್ನ ಫೋನ್ ಕೂಡಾ ಕದ್ದಾಲಿಕೆ‌ ಆಗಿದೆ.‘ನಿತ್ಯ ನನ್ನನ್ನು ಫಾಲೋ ಮಾಡ್ತಿದ್ದಾರೆ, ಎಲ್ಲಿ ಹೋಗ್ತೀನಿ ಅತ್ತ ಹಿಂದೆ ಬಿದ್ದಿದ್ದಾರೆ’. ‘ಕೆಲವು ಸಂಸ್ಥೆಗಳಿಗೆ ಫೋನ್ ಟ್ಯಾಪ್​ ಮಾಡುವ ಅಧಿಕಾರ ಇರುತ್ತೆ’. ‘ಇಂತಹವರೇ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ಅಂತ ಹೇಗೆ ಹೇಳೋದು?’‘ನಾನು ರಾಜಕೀಯಕ್ಕೆ ಬಂದಾಗಿನಿಂದ ನಿರಂತರವಾಗಿ ಕಣ್ಣಿಟ್ಟಿದ್ದಾರೆ’.ಇದ್ಯಾವುದರ ಬಗ್ಗೆ ನಾನು ತಲೆನೇ ಕೆಡಿಸಿಕೊಳ್ಳೊಲ್ಲ ' ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ