ಯಾರೂ ದಿಲ್ಲಿಗೆ ಬರಬೇಡಿ: ಡಿಕೆಶಿ ಅಭಿಮಾನಿಗಳಿಗೆ ಡಿಕೆಸು ಮನವಿ!

Published : Sep 16, 2019, 09:15 AM ISTUpdated : Sep 16, 2019, 09:17 AM IST
ಯಾರೂ ದಿಲ್ಲಿಗೆ ಬರಬೇಡಿ: ಡಿಕೆಶಿ ಅಭಿಮಾನಿಗಳಿಗೆ ಡಿಕೆಸು ಮನವಿ!

ಸಾರಾಂಶ

ಕೇಸ್‌ ವಿಚಾರಣೆ ಇದೆ ಎಂದು ಯಾರೂ ದಿಲ್ಲಿಗೆ ಬರಬೇಡಿ| ಅಭಿಮಾನಿಗಳಿಗೆ ಡಿಕೆಸು ಮನವಿ

ನವದೆಹಲಿ[ಸೆ.16]: ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಜಾಮೀನು ಅರ್ಜಿ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ದ ವಶದ ಬಗ್ಗೆ ಪಿಎಂelf ನ್ಯಾಯಾಲಯದಲ್ಲಿ ಸೆ.17ಕ್ಕೆ ಮುಂದಿನ ವಿಚಾರಣೆ ಇದ್ದು, ಅಂದು ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ದೆಹಲಿಗೆ ಬರಬೇಡಿ ಎಂದು ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಮನವಿ ಮಾಡಿದ್ದಾರೆ.

ಸೆಲ್ಫಿಗೆ ಬಂದ ಫ್ಯಾನ್ ಮೊಬೈಲ್ ಪೀಸ್ ಪೀಸ್.. ಇದು ಡಿಕೆ ಸುರೇಶ್! ವಿಡಿಯೋ

ಇದು ಡಿ.ಕೆ.ಶಿವಕುಮಾರ್‌ ಅವರ ಆಶಯವೂ ಹೌದು ಎಂದು ಡಿ.ಕೆ. ಸುರೇಶ್‌ ತಮ್ಮ ವಿನಂತಿ ಪತ್ರದಲ್ಲಿ ತಿಳಿಸಿದ್ದಾರೆ. ‘ನೀವು ಕರ್ನಾಟಕದಲ್ಲಿ ಇರುವ ಜಾಗದಲ್ಲೇ ಇರಿ. ದೆಹಲಿಗೆ ಹೆಚ್ಚು ಜನ ಬರುವುದರಿಂದ ಆಡಳಿತ ಮತ್ತು ನ್ಯಾಯಾಂಗಕ್ಕೆ ತೊಂದರೆಯಾಗುತ್ತಿದೆ. ಕಾನೂನು ಪಾಲಿಸುವ ನಾಗರಿಕರಾಗಿ ಆಡಳಿತ ಮತ್ತು ನ್ಯಾಯಾಂಗಕ್ಕೆ ತೊಂದರೆಯಾಗದಂತೆ ಇರುವುದು ನಮ್ಮ ಜವಾಬ್ದಾರಿ. ಆದ್ದರಿಂದ ಎಲ್ಲರ ಸಹಕಾರ ಕೋರುತ್ತಿದ್ದೇನೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!