ಸುಮಲತಾ ಬಳಿ ಮೊದಲೇ ಮಾತನಾಡಿದ್ದೆವು : ಡಿಕೆಶಿ ತಿಳಿಸಿದ ಸೀಕ್ರೆಟ್

By Web DeskFirst Published May 7, 2019, 2:18 PM IST
Highlights

ಮಂಡ್ಯ ಚುನಾವಣೆ ವಿಚಾರವಾಗಿ ಇದೀಗ ಡಿ.ಕೆ.ಶಿವಕುಮಾರ್ ವಿಚಾರವೊಂದನ್ನು ತಿಳಿಸಿದ್ದಾರೆ. ಟಿಕೆಟ್ ವಿಚಾರದ ಬಗ್ಗೆ ಸುಮಲತಾ ಬಳಿ ಮೊದಲೇ ಮಾತನಾಡಿದ್ದಾಗಿ ತಿಳಿಸಿದ್ದಾರೆ. 

ಹುಬ್ಬಳ್ಳಿ : ಕುಂದಗೋಳ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಹೆಸರಾದ ಡಿ.ಕೆ ಶಿವಕುಮಾರ್ ಈ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 

ಕುಂದಗೋಳ ಚುನಾವಣಾ ತಯಾರಿಯಲ್ಲಿ ತೊಡಗಿರುವ ಶಿವಕುಮಾರ್ ಇದೇ ವೇಳೆ ಮಂಡ್ಯ ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ್ದು, ಈ ಕ್ಷೇತ್ರದಲ್ಲಿ ಮೈತ್ರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸುವ ಬಗ್ಗೆ ಮೊದಲೇ ಸುಮಲತಾಗೆ ತಿಳಿಸಲಾಗಿದ್ದು ಎಂದರಿ. 

ಸಹೋದರಿ ಸುಮಲತಾಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಬೇರೆ ಕ್ಷೇತ್ರದಲ್ಲಿ ಅವಕಾಶ ಕೊಡುವುದಾಗಿ ತಿಳಿಸಲಾಗಿತ್ತು. ಆದರೆ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಬೇರೆ ಪಕ್ಷದ ಸಪೋರ್ಟ್ ತೆಗೆದುಕೊಂಡರು ಎಂದರು.

ಇನ್ನು ರಾಜ್ಯ ರಾಜಕೀಯದ ಬಗ್ಗೆಯೂ ಮಾತನಾಡಿದ ಅವರು ರಾಜಕೀಯದಲ್ಲಿ ಚದುರಂಗದ ಆಟ ಸೂಕ್ಷ್ಮವಾಗಿರುತ್ತದೆ. ಬಿಜೆಪಿಯಿಂದ ಬರುವವರನ್ನು ನಾವು ಸ್ವಾಗತಿಸುತ್ತೇವೆ. 

ಚುನಾವಣೆಯ ಬಳಿಕ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಮತ್ತಷ್ಟು ಬಲಿಷ್ಠವಾಗುತ್ತದೆ. ಕ್ಷೇತ್ರಕ್ಕೊಬ್ಬ ಸಚಿವರು ಮತ್ತು ಶಾಸಕರ ನೇಮಕ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿ ಬಿಜೆಪಿಯೂ ಇದೇ ಕೆಲಸ ಮಾಡುತ್ತಿದೆ ಎಂದರು.

click me!