ಜೆಡಿಎಸ್ ಜೊತೆ ಸ್ನೇಹವು ಬೇಡ, ವೈರತ್ವವು ಬೇಡ

Published : Apr 16, 2017, 04:21 AM ISTUpdated : Apr 11, 2018, 12:50 PM IST
ಜೆಡಿಎಸ್ ಜೊತೆ ಸ್ನೇಹವು ಬೇಡ, ವೈರತ್ವವು ಬೇಡ

ಸಾರಾಂಶ

ರುವುದರಿಂದ ಆ ಪಕ್ಷಕ್ಕೆ ತೀರಾ ಹತ್ತಿರವಾ​ಗುವುದು ಬೇಡ. ಹಾಗಂತ, ದೂರವಾ​ಗುವುದೂ ಬೇಡ. ಬದಲಾಗಿ ಸಮತೋಲಿತ ಸಂಬಂಧ ಕಾಯ್ದುಕೊಳ್ಳುವುದು ಸೂಕ್ತ

ಬೆಂಗಳೂರು(ಏ.16): ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭಾರಿ ಗೆಲುವಿಗೆ ನೆರವು ನೀಡಿದ ಜೆಡಿಎಸ್‌ ಪಕ್ಷದೊಂದಿಗೆ ಸಮತೋಲಿತ ಸಂಬಂಧ ಉಳಿಸಿಕೊ​ಳ್ಳುವಂತೆ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಿದೆ. 
ಮುಂದಿನ ಚುನಾವಣೆ ದೃಷ್ಟಿಯಿಂದ ಜೆಡಿಎಸ್‌ನೊಂದಿಗೆ ಸೂಕ್ಷ್ಮ ಸಂಬಂಧ ಕಾಯ್ದುಕೊಳ್ಳ​ಬೇಕಿ​ರುವುದರಿಂದ ಆ ಪಕ್ಷಕ್ಕೆ ತೀರಾ ಹತ್ತಿರವಾ​ಗುವುದು ಬೇಡ. ಹಾಗಂತ, ದೂರವಾ​ಗುವುದೂ ಬೇಡ. ಬದಲಾಗಿ ಸಮತೋಲಿತ ಸಂಬಂಧ ಕಾಯ್ದುಕೊಳ್ಳುವುದು ಸೂಕ್ತ ಎಂದು ತಮ್ಮನ್ನು ಭೇಟಿ ಮಾಡಿದ ರಾಜ್ಯ ನಾಯಕತ್ವಕ್ಕೆ ಹೈಕಮಾಂಡ್‌ನ ವರಿಷ್ಠರು ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತ ನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್‌ನೊಂದಿಗೆ ಚುನಾವಣೆ ಪೂರ್ವ ಒಪ್ಪಂದವನ್ನು ಮಾಡಿಕೊಳ್ಳು ವುದಿಲ್ಲ. ಕಾಂಗ್ರೆಸ್‌ ಸ್ವ ಸಾಮರ್ಥ್ಯ ದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಹೇಳಿದರು. ಇದೇ ವೇಳೆ ಅವರಿಗೆ ಹೈಕಮಾಂಡ್‌ ನಾಯಕರು, ಉಪ ಚುನಾವಣೆಯ ಗೆಲುವಿನ ಓಘವನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ 2018ರ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು ಎಂದು ಸೂಚನೆ ನೀಡಿದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಟೋನ್ಮೆಂಟ್‌ ರೈಲು ನಿಲ್ದಾಣದ 371 ಮರ ಕಡಿಯಲು ಹೈಕೋರ್ಟ್‌ ತಡೆ, ತನ್ನ ಅನುಮತಿ ಇಲ್ಲದೆ ಏನೂ ಮಾಡುವಂತಿಲ್ಲವೆಂದು ಆರ್ಡರ್
ಸ್ಕೂಲ್ ಬಸ್‌ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ; 20 ವಿದ್ಯಾರ್ಥಿಗಳಿದ್ದ ಶಾಲಾ ವಾಹನ ಪಲ್ಟಿ!