
ನವದೆಹಲಿ(ಸೆ.16): :ಅತ್ಯಾಚಾರ ಪ್ರಕರಣದ ಆರೋಪಿ ಅಸಾರಾಂ ಬಾಪು ತಾನು ಸಂತನೂ ಅಲ್ಲ. ಧರ್ಮ ಬೋಧಕನೂ ಅಲ್ಲ. ತಾನೊಬ್ಬ ಕತ್ತೆ ವರ್ಗಕ್ಕೆ ಸೇರಿದವರನು ಎಂದು ಹೇಳಿಕೊಂಡಿದ್ದಾನೆ.
ಯುವತಿಯೊಬ್ಬಳ ಮೇಲೆ ಜೋಧಪುರ ಆಶ್ರಮದಲ್ಲಿ 2013ರಲ್ಲಿ ಅತ್ಯಾಚಾರವೆಸಗಿದ ಆರೋಪ ಸಂಬಂಧ ಅಸಾರಾಂ ಬಾಪು ಜೈಲುವಾಸ ಅನುಭವಿಸುತ್ತಿದ್ದಾನೆ.
ಗುರುವಾರ ಕೋರ್ಟ್ ವಿಚಾರಣೆಗೆ ಅಸಾರಾಂನನ್ನು ಕರೆತರಲಾಗಿತ್ತು. ‘ಈ ವೇಳೆ ಅಖಿಲ ಭಾರತೀಯ ಅಖಾಡಾ ಪರಿಷದ್ ನಿಮ್ಮನ್ನು ನಕಲಿ ಸಾಧು ಎಂದು ಕರೆದಿದೆಯಲ್ಲ? ಹಾಗಿದ್ದರೆ ನೀವು ಯಾವ ವರ್ಗಕ್ಕೆ ಸೇರಿದವರು’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಪು, ತಾನು ಸಂತನೂ ಅಲ್ಲ ಅಥವಾ ಧಾರ್ಮಿಕ ಸಂಸ್ಥೆಯ ಬೋಧಕನೂ ಅಲ್ಲ. ನಾನು ಕತ್ತೆಯ ವರ್ಗಕ್ಕೆ ಸೇರಿದವ ಎಂದು ಕುಪಿತಗೊಂಡು ಪ್ರತಿಕ್ರಿಯಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.