
ನವದೆಹಲಿ(ಡಿ.14):ದಿವ್ಯಾಂಗರಿಗೆ ತಾರತಮ್ಯ ಎಸಗಿಸಿದರೆ, ಅಂಥವರು ಇನ್ನು ಕನಿಷ್ಠ 2 ವರ್ಷ ಸೆರೆವಾಸ ಹಾಗೂ ಗರಿಷ್ಠ 5 ಲಕ್ಷ ದಂಡ ತೆರಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ವಿಧೇಯಕ, 2014 ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.
ವಿಶೇಷವೆಂದರೆ, ಅಧಿವೇಶನ ಆರಂಭವಾದಾಗಿನಿಂದ ಈವರೆಗೆ ಗದ್ದಲವನ್ನೇ ಕಂಡ ರಾಜ್ಯಸಭೆಯಲ್ಲಿ ಈ ವಿಧೇಯಕ ಕುರಿತು ಮಾತ್ರ ಒಗ್ಗಟ್ಟು ಕಂಡುಬಂತು. ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಒಮ್ಮತದಿಂದ ಧ್ವನಿಮತದ ಮೂಲಕ ದಿವ್ಯಾಂಗರ ಹಕ್ಕುಗಳ ವಿಧೇಯಕವನ್ನು ಅಂಗೀಕರಿಸಿದ್ದಾರೆ. ಈ ವಿಧೇಯಕದನ್ವಯ, ದಿವ್ಯಾಂಗರ ಬಗ್ಗೆ ತಾರತಮ್ಯ ಎಸಗಿದವರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಸಾವಿರದಿಂದ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ, ಬಿಎಸ್ಪಿ ನಾಯಕಿ ಮಾಯಾವತಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸೇರಿದಂತೆ ಬಹುತೇಕ ನಾಯಕರು ಈ ವಿಧೇಯಕ ಆದಷ್ಟು ಬೇಗ ಅಂಗೀಕಾರವಾಗಲಿ ಎಂದು ಒತ್ತಾಯಿಸಿದ್ದು ಕಂಡುಬಂತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.