ಬಳ್ಳಾರಿಯ ಖಾಸಗಿ ಕಾಲೇಜಿನಲ್ಲಿ ಅಶ್ಲೀಲ ಬರಹಗಳು: ವಿಕೃತ ಮನಸ್ಸಿನ ವಿದ್ಯಾರ್ಥಿಗಳಿಂದ ಕೃತ್ಯ

Published : Sep 10, 2016, 01:43 AM ISTUpdated : Apr 11, 2018, 12:41 PM IST
ಬಳ್ಳಾರಿಯ ಖಾಸಗಿ ಕಾಲೇಜಿನಲ್ಲಿ ಅಶ್ಲೀಲ ಬರಹಗಳು: ವಿಕೃತ ಮನಸ್ಸಿನ ವಿದ್ಯಾರ್ಥಿಗಳಿಂದ ಕೃತ್ಯ

ಸಾರಾಂಶ

ಬಳ್ಳಾರಿ(ಸೆ.10): ಕಾಲೇಜು ಕೊಠಡಿಗಳೆಂದರೆ ಶುದ್ಧವಾಗಿ, ಕಲಿಯಲು ಒಳ್ಳೆ ವಾತಾವಣವಿರುತ್ತದೆ. ಆದರೆ ಬಳ್ಳಾರಿಯ ನಾರಾಯಣ ಪಿಯು ಕಾಲೇಜಿನ ಕೊಠಡಿಗಳನ್ನು ನೋಡಿದರೆ ಇದಕ್ಕೆ ತದ್ವಿರುದ್ಧ. ವಿದ್ಯಾರ್ಜನೆ ಮಾಡುವ ಕೊಠಡಿಯ ಗೋಡೆಗಳು ಅಶ್ಲೀಲ ಪದಗಳಿಂದ ರಾರಾಜಿಸುತ್ತಿವೆ.

ನಿನ್ನೆ ನಡೆದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾಲೇಜಿನ ತರಗತಿಯನ್ನ ಬಂದ್ ಮಾಡಿಸಲು ಕನ್ನಡಪರ ಹೋರಾಟಗಾರರು ಕಾಲೇಜಿನ ಕೊಠಡಿಗಳಿಗೆ ಹೋಗಿದ್ದಾರೆ. ಈ ವೇಳೆ ಕೊಠಡಿಯ ಗೋಡೆಗಳ ಮೇಲೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅಶ್ಲೀಲ ಪದಗಳು ಬರೆದಿರುವುದು ಕಂಡುಬಂದಿದೆ. ಕೂಡಲೇ ಕನ್ನಡಪರ ಹೋರಾಟಗಾರರು ಕಾಲೇಜು ಅಡಳಿತ ಮಂಡಳಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗಾಂಧಿನಗರ ಪೊಲೀಸರು ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ 'ನಿನ್ನೆಯಷ್ಟೇ ಈ ವಿಷಯ ಗಮನಕ್ಕೆ ಬಂದಿದೆ, ಅಶ್ಲೀಲ ಗೋಡೆ ಬರೆಹಗಳನ್ನು ಬರೆದ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ' ಎಂದು ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಳ್ಳಾರಿಯಲ್ಲಿ ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ: ಕಾಲು ಗೆಜ್ಜೆ ತೆಗೆದು ಪರೀಕ್ಷೆ ಬರೆದ ವಿದ್ಯಾರ್ಥಿನಿಯರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ