ಮಂಗಳೂರು-ದೆಹಲಿ ಮಧ್ಯೆ ನೇರ ವಿಮಾನಯಾನ ಆರಂಭ

Published : Aug 05, 2019, 10:45 AM IST
ಮಂಗಳೂರು-ದೆಹಲಿ  ಮಧ್ಯೆ ನೇರ ವಿಮಾನಯಾನ ಆರಂಭ

ಸಾರಾಂಶ

ಮಂಗಳೂರು-ದೆಹಲಿ ಮಧ್ಯೆ ಭಾನುವಾರದಿಂದ ನೇರ ವಿಮಾನಯಾನ ಪುನಃ ಆರಂಭ | ಆ. 04 ರಿಂದ ವಿಮಾನಯಾನ ಆರಂಭ 

ಮಂಗಳೂರು (ಆ. 05): ಮಂಗಳೂರು-ದೆಹಲಿ ಮಧ್ಯೆ ಭಾನುವಾರದಿಂದ ನೇರ ವಿಮಾನಯಾನ ಪುನಃ ಆರಂಭಗೊಂಡಿದ್ದು, ವಯಾ ಬೆಂಗಳೂರು ಅಥವಾ ಮುಂಬೈ ಮೂಲಕ ತೆರಳಬೇಕಾದ ಪ್ರಮೇಯ ತಪ್ಪಿದಂತಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ವಿ.ವಿ.ರಾವ್‌ ಅವರು ಪ್ರಯಾಣಿಕರೊಬ್ಬರಿಗೆ ಬೋರ್ಡಿಂಗ್‌ ಪಾಸ್‌ನ್ನು ಹಸ್ತಾಂತರಿಸುವ ಮೂಲಕ ಮೊದಲ ದೆಹಲಿ ನೇರ ವಿಮಾನಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಸ್ಪೈಸ್‌ ಜೆಟ್‌ ಪ್ರಾದೇಶಿಕ ವ್ಯವಸ್ಥಾಪಕ ನವಲ್‌ ಕಿಶೋರ್‌, ಸ್ಟೇಷನ್‌ ಮೆನೇಜರ್‌ ಸಂತೋಷ್‌, ಕರ್ತವ್ಯ ಅಧಿಕಾರಿ ಆಶಿತ್‌ ರಾಜ್‌ ಇದ್ದರು. ಈ ಸ್ಪೈಸ್‌ಜೆಟ್‌ ಪ್ರತಿದಿನ ಬೆಳಗ್ಗೆ 6.15ಕ್ಕೆ ಮಂಗಳೂರಿನಿಂದ ಹೊರಟು 8.55ಕ್ಕೆ ದೆಹಲಿ ತಲುಪಲಿದೆ.

ದೆಹಲಿಯಿಂದ ರಾತ್ರಿ 8.55ಕ್ಕೆ ಹೊರಟು 11.25ಕ್ಕೆ ಮಂಗಳೂರು ತಲುಪಲಿದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನಿಂದ ದೆಹಲಿಗೆ ನೇರ ವಿಮಾನ ಯಾನ ಸೇವೆ ಇದ್ದರೂ ಬಳಿಕ ಅದು ಸ್ಥಗಿತಗೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ