ನ್ಯಾಯಾಂಗ ಬಂಧನಕ್ಕೆ ಟಿಟಿವಿ ದಿನಕರನ್

By Suvarna Web DeskFirst Published May 1, 2017, 11:33 AM IST
Highlights

ಪೊಲೀಸರು ಈಗಾಗಾಲೇ ದಿನಕರನ್​ನನ್ನು​ ತಿಹಾರ್​ ಜೈಲಿಗೆ ಕರೆದೊಯ್ಯಿದ್ದಾರೆ. ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್​ ಪಕ್ಷದ ಎರಡೆಲೆ ಚಿಹ್ನೆಗಾಗಿ 50 ಕೋಟಿ ಹಣ ನೀಡಿರುವ ಆರೋಪ ಕೇಳಿಬಂದಿದ್ದು ದೆಹಲಿ ಪೊಲೀಸರು ಎಫ್'ಐಆರ್ ದಾಖಲಿಸಿದ್ದರು.

ನವದೆಹಲಿ (ಮೇ.01): ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಗಾಗಿ 50 ಕೋಟಿ ಲಂಚ ಪ್ರಕರಣ ಸಂಬಂಧ ಟಿಟಿವಿ ದಿನಕರನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಇವತ್ತಿಗೆ ಪೊಲೀಸ್ ಕಸ್ಟಡಿ ಮುಗಿದ ಕಾರಣ, ದೆಹಲಿಯ ತೀಸ್​ ಹಜಾರಿ ಕೋರ್ಟಿಗೆ ದಿನಕರನ್’ರನ್ನು ಹಾಜರುಪಡಿಸಲಾಯ್ತು. ಈ ವೇಳೆ ನ್ಯಾಯಾಧೀಶರು, ವಾದ-ಪ್ರತಿವಾದ ಆಲಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ, ಹೀಗಾಗಿ ಮೇ 15ರವರೆಗೆ ಬಂಧನಕ್ಕೊಪ್ಪಿಸಲಾಗಿದೆ.

ಪೊಲೀಸರು ಈಗಾಗಾಲೇ ದಿನಕರನ್​ನನ್ನು​ ತಿಹಾರ್​ ಜೈಲಿಗೆ ಕರೆದೊಯ್ಯಿದ್ದಾರೆ. ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್​ ಪಕ್ಷದ ಎರಡೆಲೆ ಚಿಹ್ನೆಗಾಗಿ 50 ಕೋಟಿ ಹಣ ನೀಡಿರುವ ಆರೋಪ ಕೇಳಿಬಂದಿದ್ದು ದೆಹಲಿ ಪೊಲೀಸರು ಎಫ್'ಐಆರ್ ದಾಖಲಿಸಿದ್ದರು.

ಈ ಕೇಸಿನಲ್ಲಿ ಮಲ್ಲಿಕಾರ್ಜುನ್ ಮತ್ತು ಬೆಂಗಳೂರು ಮೂಲಕ ದಲ್ಲಾಳಿ ಸುಖೇಶ್ ಕೂಡ ಸದ್ಯ ಜೈಲಿನಲ್ಲಿದ್ದಾರೆ.

click me!