
ಇಂದಿನ ದಿನ ಭವಿಷ್ಯ ಹೀಗಿದೆ ನೋಡಿ
ಮೇಷ: ವಾಹನ ಸವಾರರು, ಕಂಪ್ಯೂಟರ್ ಕೆಲಸ ಮಾಡುವವರಿಗೆ ಸ್ವಲ್ಪ ನೆಮ್ಮದಿಯ ದಿನವಿದು. ತಂತ್ರಜ್ಞಾನಕ್ಕೆ ಮೆಚ್ಚುಗೆಯೂ ಸಿಗಲಿದೆ.
ವೃಷಭ: ಸುಖವೆಂದರೇನೆಂದು ತಿಳಿಯಲು ಇದು ಸೂಕ್ತ ದಿನವಾಗಿದೆ. ನಿಮಗೇ ಗೊತ್ತಿಲ್ಲದೇ ನಿಮ್ಮ ಎಲ್ಲಾ ದಾರಿಗಳು ತಂತಾನೆ ತೆರೆದುಕೊಳ್ಳಲಿದೆ.
ಮಿಥುನ: ಓದುವವರಿಗೆ ಬಿಡುವು ಇರುವುದಿಲ್ಲ. ಸ್ವಲ್ಪ ದಿನಗಳು ಕಷ್ಟ ಪಟ್ಟರೆ ಒಳ್ಳೆಯ ದಿನಗಳು ಬರಲಿವೆ. ಏಕಾಗ್ರತೆಗೆ ತಕ್ಕ ಫಲ ಸಿಗಲಿದೆ.
ಕಟಕ: ಏಕಪಕ್ಷೀಯ ಸ್ವಭಾವವು ನಿಮ್ಮನ್ನು ಪರೀಕ್ಷೆಗೆ ಒಡ್ಡುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒತ್ತಡಕ್ಕೆ ಮಣಿಯದಿರಿ.
ಸಿಂಹ: ಇಂತಹ ದಿನಕ್ಕಾಗಿ ನೀವು ಸಾಕಷ್ಟು ದಿನಗಳಿಂದ ಕಾಯುತ್ತಲೇ ಬಂದಿದ್ದೀರಿ. ಆ ದಿನ ಇವತ್ತು ಬಂದಿದೆ. ನಿಮ್ಮ ತಾಳ್ಮೆಗೆ ತಕ್ಕ ಫಲ ಸಿಗಲಿದೆ.
ಕನ್ಯಾ: ನಿಮ್ಮ ಉದಾರ ಬುದ್ಧಿಯು ನಿಮಗೇ ಕುತ್ತಾಗಲಿದೆ. ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವವರು ಇಂದು ಹೆಚ್ಚಾಗಿದ್ದಾರೆ.
ತುಲಾ: ಬಂಧುಬಳಗದವರಲ್ಲಿ ಪ್ರೀತಿ ಹೆಚ್ಚುತ್ತದೆ. ಮನೆಯಲ್ಲಿ ಮಂಗಳ ಕಾರ್ಯವು ನಡೆಯುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಖುಷಿ.
ವೃಶ್ಚಿಕ: ನಿಮ್ಮ ಗುರಿ ಸಾಧನೆಯತ್ತ ಮಾತ್ರ ನಿಮ್ಮ ಆಸಕ್ತಿ ಇದೆ. ಆಯವ್ಯಯದಲ್ಲಿ ಏರುಪೇರು. ಕ್ರಯ ವಿಕ್ರಯಗಳ ಮಾತುಕತೆಗಳು ನಡೆಯಲಿದೆ.
ಧನಸ್ಸು: ಕಾರಣವಿಲ್ಲದೆಯೇ ಮನಸ್ಸು ಚಂಚಲವಾಗಿದೆ. ಅದೇಕೆ ಹೀಗೇಂದು ತಿಳಿಯದೇ ಚಡಪಡಿಸಲಿದ್ದೀರಿ. ಧ್ಯಾನ-ಪ್ರಾಣಾಯಮ ಮಾಡಿ.
ಮಕರ: ವ್ಯವಹಾರದಲ್ಲಿ ಪ್ರಗತಿ. ಭಿನ್ನಾಭಿಪ್ರಾಯ ಭೇದಗಳಿಂದ ವೈಮನಸ್ಯಗಳು ಉಂಟಾಗಬಹುದು. ಎಚ್ಚರಿಕೆಯಿಂದ ವ್ಯವಹರಿಸಿ.
ಕುಂಭ: ವಯೋಮಾನದ ತೊಂದರೆ ಬಾದಿಸುವುದು. ಅದಷ್ಟು ಹೊರಗಿನ ಆಹಾರವನ್ನು ನಿಷೇಧಿಸುವುದು ಉಚಿತ. ಗೆಳೆಯರ ಆಗಮನವಾಗಲಿದೆ.
ಮೀನಾ: ಗ್ರಹಗತಿಗಳೆಲ್ಲವೂ ನಿಮ್ಮ ಪರವಾಗಿಯೇ ಇವೆ. ಆದರೆ ನಿಮ್ಮಲ್ಲಿರುವ ದೋರಣೆಯ ಬುದ್ಧಿ ಮೀನ ಯನ್ನು ಸರಿಪಡಿಸಿಕೊಂಡರೆ ಒಳಿತಾಗುವುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.