ರವಿ ಬೆಳಗೆರೆ ಹಾಗೂ ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಿ ವಿರುದ್ಧ 456 ಪುಟಗಳ ಚಾರ್ಜ್'ಶೀಟ್ ಸಲ್ಲಿಸಿದ್ದಾರೆ.
ಬೆಂಗಳೂರು(ಮಾ.12): ಪತ್ರಕರ್ತ ರವಿ ಬೆಳಗೆರೆ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ರವಿ ಬೆಳಗೆರೆ ಹಾಗೂ ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಿ ವಿರುದ್ಧ 456 ಪುಟಗಳ ಚಾರ್ಜ್'ಶೀಟ್ ಸಲ್ಲಿಸಿದ್ದಾರೆ.
ಶಶಿಧರ್ ಮುಂಡೇವಾಡಿ ಆರೋಪಿ ಮೊದಲ ಆರೋಪಿ ಆದರೆ ರವಿ ಬೆಳಗೆರೆ 2ನೇ ಆರೋಪಿಯಾಗಿದ್ದಾರೆ. ಸಿಸಿಬಿ ಪೊಲೀಸರು 2 ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪೊಲೀಸರ ಮುಂದೆ ಆರೋಪಿ ಶಶಿಧರ್ ಮುಂಡೆವಾಡಿ ತಪ್ಪೊಪ್ಪಿಕೊಂಡಿದ್ದಾನೆ.
ಚಾರ್ಜ್'ಶೀಟ್ ವಿವರ
ಭಾಗಪ್ಪ ಹರಿಜನ್ ಮೂಲಕ ರವಿ ಬೆಳಗೆರೆಗೆ ಶಶಿಧರ್ ಮುಂಡೆವಾಡಿ ಪರಿಚಯ
5 ವರ್ಷದ ಹಿಂದೆ ರವಿಬೆಳಗೆರೆ ಬಳಿ ಕೆಲಸಕ್ಕೆ ಸೇರಿದ್ದ
1 ವರ್ಷ ಪ್ರಾರ್ಥನಾ ಶಾಲೆಯಲ್ಲಿ ಕರಾಟೆ ಕ್ಲಾಸ್ ಮಾಡುತ್ತಿದ್ದ
ಬೆಳಗೆರೆಗೆ ಬಾಡಿಗಾರ್ಡ್ ರೀತಿ ಅವರರೊಟ್ಟಿಗೆ ಹೋಗಿ ಬರುತ್ತಿದ್ದ
ಅವರ ಪೋನ್ ತೆಗಿಯಲಿಲ್ಲ ಎಂಬ ಕಾರಣಕ್ಕೆ ಶಶಿಧರ್ನನ್ನು ಕೆಲಸದಿಂದ ತೆಗೆದಿದ್ದ ಬೆಳಗೆರೆ
ಭಾಗಪ್ಪ ಹರಿಜನ್ ಜೊತೆ 4 ಪ್ರಕರಣಗಳಲ್ಲಿ ಭಾಗಿಯಾಗಿರುವ ಶಶಿಧರ್
ರ ಜುಲೈನಲ್ಲಿ ಪತ್ರಕರ್ತ ಮಲಗೊಂಡ ಮೂಲಕ ಮತ್ತೆ ರವಿ ಬೆಳಗೆರೆ ಸಂಪರ್ಕಕ್ಕೆ ಬಂದಿದ್ದ ಶಶಿಧರ್
ರ ಆಗಸ್ಟ್ನಲ್ಲಿ ಶಶಿಧರ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ರವಿ ಬೆಳಗೆರೆ
ಪೋನ್ ತರದಂತೆ ಹಾಗೂ ಬಳಸದಂತೆ ಶಶಿಧರ್ ಸೂಚಸಿದ್ದ ರವಿ ಬೆಳಗೆರೆ
ಜೊತೆ ವಿಜು ಬಡಿಗೇರ್ ಸಹ ಬೆಂಗಳೂರಿಗೆ ಬಂದು ಬೆಳಗೆರೆ ಭೇಟಿ
ಮುಖ್ಯ ಕೆಲಸ ನಿನ್ನಿಂದ ಆಗಬೇಕಿದ್ದು, ಮಾಡುತ್ತಿಯಾ ಎಂದಾದರೇ ಹೇಳುತ್ತೇನೆಂದಿದ್ದ ಬೆಳಗೆರೆ
ಬೆಳಗೆರೆ ಅನ್ನದ ಋಣ ತೀರಿಸಲು ಏನೇ ಆದರೂ ಮಾಡುತ್ತೆನೆ ಎಂದು ಒಪ್ಪಿಕೊಂಡ ಶಶಿಧರ್
ಹೆಗ್ಗರವಳ್ಳಿಯನ್ನು ಮುಗಿಸಬೇಕು ಮಾಡುತ್ತಿಯಾ ಎಂದಿದ್ದ ರವಿ ಬೆಳೆಗೆರೆ
ಮುಂದೆ ರವಿ ಬೆಳಗೆರೆ ಕಣ್ಣೀರು ಹಾಕುತ್ತಾ ಸುನಿಲ್ ಮಾಡಿದ್ದ ಮೋಸ ವಿವರಿಸಿದ್ದರು
ನನ್ನ ಮಗನಂತಿದ್ದು, ನನ್ನ ಹೆಂಡತಿ ಜೊತೆ ಮಲಗಿದ್ದಾನೆಂದು ಅಳುತ್ತಾ ಹೇಳಿದ್ದರು
ಬೆಳಗೆರೆ ಅವರು ಕಣ್ಣೀರು ಹಾಕಿದ್ದನ್ನು ಕಂಡು ಬೇಸರವಾಗಿ ಸುನಿಲ್ ಎಲ್ಲಿದ್ದಾನೆಂದು ಕೇಳಿದ್ದ ಶಶಿಧರ್
ಇದ್ದಾನೆ, ನೀನೇ ವೆಪನ್ ತಂದು ಆತನನ್ನ ಮುಗಿಸು ಎಂದು ಸೂಚಿಸಿದ್ದ ರವಿಬೆಳಗೆರೆ
ಮನೆಯ ವಿಳಾಸ ಹಾಗೂ 5000 ರೂಪಾಯಿ ನೀಡಿ ಕಳುಹಿಸಿದ್ದ ರವಿ ಬೆಳಗೆರೆ
ಬಡಿಗೇರ್ ಹಾಗೂ ಸುನಿಲ್ ಇಬ್ಬರರೂ ಸುನಿಲ್ ಹೆಗ್ಗರವಳ್ಳಿ ಮನೆ ಬಳಿ ತೆರಳಿ ಸಂಚು ರೂಪಿಸಿದ್ದರು
ದಿನಗಳ ಊರಿಗೆ ಹೋಗಿ ಬಂದ ನಂತರ ಯಲಹಂಕದ ರಮೇಶ್ ಅವರ ಮಗನ ಕಿಡ್ನಾಪ್ ಯತ್ನ
ನನ್ನು ಕಚೇರಿಗೆ ಕರೆಸಿಕೊಂಡು ಗನ್, 4 ಗುಂಡು, ಕಾರು ಹಾಗೂ 10 ಸಾವಿರ ರೂ. ನೀಡಿದ್ದ ರವಿಬೆಳಗೆರೆ
ಹೆಗ್ಗರವಳ್ಳಿ ಮನೆ ಬಳಿ ಹೊಂಚು ಹಾಕಿದ್ದು, ಕಾರ್ಯ ಸಫಲವಾಗಲೇ ವಾಪಸ್ಸಾಗಿದ್ದ ಶಶಿಧರ್, ವಿಜು
ತೆರಳಿ ಸುನಿಲ್ಗೆ ಗನ್ ಪಾಯಿಂಟ್ ಮಾಡಿದ್ದರೂ, ಆತನ ಸಿಗದೇ ಪಾರಾಗಿದ್ದ
ಸಿಸಿಟಿವಿ ಇದ್ದುದ್ದರಿಂದ ಶೂಟ್ ಮಾಡಲು ಹಿಂದೇಟು ಹಾಕಿ ವಾಪಾಸ್ಸಾಗಿದ್ದ ಶಶಿಧರ್
ಕೊಲೆಯನ್ನ ಕೆಲ ದಿನ ಬಿಟ್ಟು ಮಾಡುವುದಾಗಿ ತಿಳಿಸಿ ಊರಿಗೆ ತೆರಳಿದ್ದ ಶಶಿಧರ್
, ಗುಂಡುಗಳು ಹಾಗು ಚಾಕುವನ್ನು ಹಾಯ್ ಬೆಂಗಳೂರು ಕಚೇರಿಯಲ್ಲಿ ಬಿಟ್ಟು ಹೋಗಿದ್ದ ಶಶಿಧರ್
ದಿನಗಳ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಮಹಾರಾಷ್ಟ್ರದ ಗಾಂಧಿಚೌಕ್ ಪೊಲೀಸರಿಂದ ಶಶಿಧರ್ ಅರೆಸ್ಟ್
ಜೈಲಿನಲ್ಲಿ 12 ದಿನ ಇದ್ದು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶಶಿಧರ್
ಬೆಂಗಳೂರಿಗೆ ಬಂದಿದ್ದ ಶಶಿಧರ್ನನ್ನು ಪಿಸ್ತೂಲ್ ಸಮೇತ ಸಿಸಿಬಿ ಪೊಲೀಸರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.