
ಮೇಷ
ಮನಃಸ್ತಾಪಕ್ಕೆ ಒಳಗಾಗದಿರಿ. ಶಾಂತ
ಚಿತ್ತರಾಗಿದ್ದು ಕೆಲಸಗಳಲ್ಲಿ ತೊಡಗಿ. ನಿಮ್ಮ
ಹೊಣೆಗಾರಿಕೆಗೆ ಹೆದರದೇ ಮುನ್ನುಗ್ಗಿ.
ವೃಷಭ
ಪ್ರಯಾಣದ ಆಲಸ್ಯಕ್ಕೆ ಮದ್ದು ತೆಗೆದುಕೊಳ್ಳಿ.
ನಿಮ್ಮ ಗೆಳೆಯನ ಸಂಸಾರವನ್ನು ಸರಿ ಮಾಡಿ
ದಕ್ಕೆ ಪ್ರಶಂಸೆಗಳ ಪೂರವೇ ಹರಿಯಲಿವೆ.
ಮಿಥುನ
ನಿಮ್ಮ ಹಳೆಯ ಸ್ನೇಹಿತನ ಆಗಮನದಿಂದ
ನಿಮ್ಮ ಮನಸ್ಸಿಗೆ ಬಲ ಹೆಚ್ಚಿದೆ. ಅನವಶ್ಯಕ
ಚಿಂತೆ ಮಾಡದಿರಿ. ಧೈರ್ಯದಿಂದಿರಿ.
ಕಟಕ
ನಿಮ್ಮ ಸೃಜನಾತ್ಮಕ ಕಲ್ಪನೆಯನ್ನು ಸೂಕ್ತ
ನಿಟ್ಟಿನಲ್ಲಿ ಬಳಸಿ. ಕಲಾವಿದರಿಗೆ ಒಳ್ಳೆಯ
ದಿನ. ಹಣಕಾಸಿನ ವಹಿವಾಟುಗಳಲ್ಲಿ ನಷ್ಟ.
ಸಿಂಹ
ನೆನಗುದಿಯಲ್ಲಿದ್ದ ಕಾರ್ಯಗಳು ಭರದಿಂದ
ಸಾಗುತ್ತವೆ. ಕೌಟಂಬಿಕ ನೆಮ್ಮದಿ. ನಿಮ್ಮ ಬಗ್ಗೆ
ಮನೆಯಲ್ಲಿ ಗೌರವವು ಹೆಚ್ಚಾಗುತ್ತದೆ.
ಕನ್ಯಾ
ಊರಲ್ಲಿನ ಆಸ್ತಿ ವಿವಾದ ಒಂದು ಹಂತ
ತಲುಪಲಿದೆ. ಜನ ನಿಮ್ಮ ಬೆಂಬಲಕ್ಕಿದ್ದಾರೆ.
ಜಯ ನಿಮ್ಮದಾಗಲಿದೆ. ಖುಷಿಯ ದಿನ.
ತುಲಾ
ನಿಮ್ಮ ಬಳಗದ ವಾಟ್ಸಪ್ನಲ್ಲಿ ಬಂದ
ಗಹನವಾದ ವಿಷಯದ ಚರ್ಚೆಯನ್ನು ಓದಿ
ತುಲಾ ಮರೆಯಿರಿ. ಅದಕ್ಕೆ ಪ್ರತಿಕ್ರಿಯೆ ಒಳಿತಲ್ಲ
ವೃಶ್ಚಿಕ
ಕಲೆಗೆ ಸಂಬಂಧಿಸಿದವರಿಗೆ ಇದು ಶುಭ
ಕಾಲ. ನಿಮಗೆ ಒಳ್ಳೆಯ ಸುದ್ದಿ ಕಾದಿದೆ.
ಮಿತ್ರರು ನಿಮ್ಮನ್ನು ಬೆಂಬಲಿಸುವರು.
ಧನಸ್ಸು
ನಿಮ್ಮ ಕನಸನ್ನು ಕಾರ್ಯರೂಪಕ್ಕೆ ತರಲು
ಇದು ನಿಮಗೆ ಸೂಕ್ತ ಕಾಲ. ಸಹೋದರರ
ಸಹಕಾರವೂ ನಿಮಗೆ ಪ್ರಾಪ್ತವಾಗುತ್ತೆ.
ಮಕರ
ನಿಮ್ಮ ಯೋಚನೆಗಳನ್ನು ಶೀಘ್ರವಾಗಿ ಕಾರ್ಯ
ರೂಪಕ್ಕೆ ತರುತ್ತೀರಿ. ಭೂಮಿ, ಮನೆ ಕೊಳ್ಳಲು
ಸೂಕ್ತ ಸಮಯವಿದು. ನಿರ್ಧಾರ ನಿಮ್ಮದು.
ಕುಂಭ
ಮನೆಯಲ್ಲಿ ಸಂಭ್ರಮ ಕಾರ್ಯಗಳಿಂದ
ಕೌಟಂಬಿಕ ನೆಮ್ಮದಿ ನೆಲೆಸುತ್ತದೆ. ಹಣಕಾಸಿನ
ವಿಷಯದಲ್ಲಿ ಎಚ್ಚರವಿದ್ದಷ್ಟು ಒಳಿತಾಗಲಿದೆ.
ಮೀನ
ನೀವು ಜನರನ್ನು ಪ್ರಭಾವಿತರನ್ನಾಗಿಸುತ್ತೀರಿ.
ವೃತ್ತಿ ಜೀವನವನ್ನು ಸರಿಯಾದ ದಿಕ್ಕಿನತ್ತ
ಮೀನ ತಿರುಗಿಸಲು ಇದು ಸೂಕ್ತ ಸಮಯವಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.