
ಬೆಂಗಳೂರು (ಫೆ. 27): ಶಿವಸೇನೆ ಮತ್ತು ತೆಲಗುದೇಶಂ ನಂತರ ಈಗ ನಿತೀಶ್ ಕುಮಾರ್ ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ನಿತೀಶ್ ಮತ್ತು ಅಮಿತ್ ಶಾ ನಡುವೆ ನಡೆದ ಮಾತುಕತೆ ಕಗ್ಗಂಟಾಗಿದೆ. 2014 ರಲ್ಲಿ ಕೇವಲ ಎರಡು ಸೀಟು ಗೆದ್ದಿರುವುದರಿಂದ ಹೆಚ್ಚು ಎಂದರೆ ನಿಮಗೆ 9 ಸ್ಥಾನ ಕೊಡುತ್ತೇವೆ ಎಂದು ಅಮಿತ್ ಶಾ ನಿತೀಶ್ ಬಳಿ ಹೇಳಿದ್ದು, ಕನಿಷ್ಠ 20 ಸೀಟ್ ಕೊಡಿ ಎಂದು ನಿತೀಶ್ ಕೇಳಿದ್ದಾರಂತೆ. ಹಿಂದೆ ಮೈತ್ರಿ ಇದ್ದಾಗ ನಿತೀಶ್ 25 ಸ್ಥಾನದಲ್ಲಿ ನಿಂತುಕೊಳ್ಳುತ್ತಿದ್ದರೆ ಬಿಜೆಪಿ 15 ರಲ್ಲಿ ನಿಲ್ಲುತ್ತಿತ್ತು. ಆದರೆ ಈಗ ಮೋದಿ ಬಂದ ಮೇಲೆ ಆಟದ ನಿಯಮಗಳು ಬದಲಾಗಿವೆ.
-ಪ್ರಶಾಂತ್ ನಾತು
ಹೆಚ್ಚಿನ ರಾಜಕೀಯ ಸುದ್ದಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.