
ಬೆಂಗಳೂರು (ಸೆ.20): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ತೀರ್ಪು ಹೊರಬಿದ್ದಿರುವ ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆಯೇ ಮೇಲಾಯಿತಾ ಅನ್ನೋದನ್ನ ಗಮನಿಸುವಾಗ ಈ ಅಂಶಗಳು ಸಿಗುತ್ತದೆ.
ರಾಜಕೀಯ ತಂತ್ರಗಾರಿಕೆಯಲ್ಲಿಯೇ ಮೈಮರೆತ ನಾಯಕರು
ಬಿಜೆಪಿಯವರಿಗೆ ಎದಿರೇಟು ಕೊಡುತ್ತಾ ಕುಳಿತ ಕಾಂಗ್ರೆಸ್ಸಿಗರು
ಸಲಹೆ ಕೊಡಲಿಲ್ಲ, ಪ್ರಧಾನಿಯನ್ನು ತಲುಪಲಿಲ್ಲ ಬಿಜೆಪಿ ಧ್ವನಿ
ನಾವಿದ್ರೆ ರಾಜಿನಾಮೆ ಕೊಡ್ತೀವಿ ಎನ್ನುತ್ತಾ ಕಾಲ ಕಳೆದ ಬಿಜೆಪಿ
ಜೆಡಿಎಸ್ ನಲ್ಲಿ ದೇವೆಗೌಡರ ಮಾತೊಂದು, ಕುಮಾರಸ್ವಾಮಿ ಮಾತು ಇನ್ನೊಂದು
ಜೆಡಿಎಸ್ ಸರ್ಕಾರದ ಪರವೋ ಜನರ ಪರವೋ ಗೊತ್ತಾಗಲಿಲ್ಲ
ಒಟ್ಟಿನಲ್ಲಿ ಒಡಕಿನ ರಾಜಕಾರಣಕ್ಕೆ ಬೆಲೆ ತೆತ್ತದ್ದು ಕರ್ನಾಟಕ
ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು ಪರಸ್ಪರ ಕಸರೆರಚಾಟ ಮುಂದುವರೆಸಿದವು. ಪ್ರಾದೇಶಿಕ ಪಕ್ಷಗಳು ದ್ವಂದ್ವ ನಿಲುವು. ಒಟ್ಟಿನಲ್ಲಿ ಕಾವೇರಿ ಸಮಸ್ಯೆಯ ಪರಿಹಾರಕ್ಕೆ ಪ್ರಭಾವ ಬೀರುವ, ಒತ್ತಡ ಹೇರುವ ಪ್ರಯತ್ನವನ್ನು ಯಾರೂ ಮಾಡದೇ ಇರುವುದು ಸ್ಪಷ್ಟವಾಗುತ್ತದೆ. ಬಿಜೆಪಿಯ ಅತೀ ಹೆಚ್ಚು ಸಂಸದರು ಆಯ್ಕೆಯಾಗಿದ್ದು ಪ್ರಧಾನಿಯವರಿಗೆ ಈ ವಿಚಾರದ ಬಗ್ಗೆ ಹೇಳುವ, ಕರ್ನಾಟಕದ ಪರ ಮಾತನಾಡಿ ಪ್ರಧಾನಿಯವರು ಮಧ್ಯ ಪ್ರವೇಶಿಸುವಂತೆ ನೋಡಿಕೊಳ್ಳಲಿಲ್ಲ. ಇದು ಕೂಡಾ ಹಿನ್ನೆಡೆಗೆ ಕಾರಣವಾಗಿರಬಹುದು.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾವೇರಿ ನೀರನ್ನು ಪಡೆಯುವುದರ ಜೊತೆಗೆ ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೂ ಕೂಡ ಆದೇಶ ಪಡೆದುಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಒಟ್ಟಿನಲ್ಲಿ ಅಮ್ಮಾ ರಾಜಕೀಯ ತಂತ್ರಗಾರಿಕೆಗೆ ಕರ್ನಾಟಕದ ರಾಜಕಾರಣಿಗಳು ಮಂಡಿಯೂರಿ ಕುಳಿತಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.