
ಬೆಂಗಳೂರು (ಸೆ,20): ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಸಂಬಂಧಿಸಿ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ತಕ್ಕಡಿಯಲ್ಲಿ ತೂತಿದೆ ಎಂ ಟ್ವೀಟರ್ ಮೂಲಕ ತೀವ್ರ ಆಕ್ರೋಶ ಪಡಿಸಿದ್ದಾರೆ.
ಕಲಿಯುಗದಲ್ಲಿ ಅನ್ಯಾಯವೇ ರಾಜ, ಹಾದರವೇ ಮಂತ್ರಿ, ಕಳ್ಳಕಾಕರೇ ಸೇನಾಧಿಪತಿಗಳು, ನ್ಯಾಯ ಹಳ್ಳದ ಕಡೆ, ಅನ್ಯಾಯ ಸುಪತ್ತಿನಕಡೆ; ಸತ್ಯವಂತ ಸುಡುಗಾಡಿಗೆ, ಅಸತ್ಯವಂತ ಲೋಕಪೂಜಿತ ಎಂದು ಜಗ್ಗೇಶ್ ಟ್ವೀಟಿಸಿದ್ದಾರೆ.
ಮುಂದುವರೆದು, ನ್ಯಾಯಾಂಗ ಸಂವಿಧಾನದ ಕಂದ..ಸಂವಿಧಾನದಲ್ಲಿ ಎಲ್ಲರು ಸಮಾನರು..ಆದರು ನ್ಯಾಯಾಂಗ ಒಂದು ಕಣ್ಣಿಗೆಚಿಕಿತ್ಸೆ ಇನ್ನೊಂದುಕಣ್ಣಿಗೆ ಊನಮಾಡಿ!!ನೊಂದ ಮನಕ್ಕೆ ಮತ್ತೆ ಬರೆಹಾಕಿತು!! ಎಂದು ಜಗ್ಗೇಶ್ ಅಸಮಧಾನ ವ್ಯಕ್ತಪಡಿಸಿದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.