
ಮುಂಬೈ(ಅ.06): ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಎಂ.ಎಸ್.ಧೋನಿ ಬಯೋಪಿಕ್ ಸಂಬಂಧಿಸಿದಂತೆ ಅಂತೆ-ಕಂತೆಗಳು ಹೆಚ್ಚು ಪ್ರಚಲಿತವಾಗಿದೆ. ಚಿತ್ರದಲ್ಲಿ ಧೋನಿ ಸ್ವಂತ ಅಣ್ಣನೇ ಮರೆಯಾಗಿದ್ದು, ಈ ಕುರಿತಂತೆ ಸಾಕಷ್ಟು ಸುದ್ದಿಗಳು ಪ್ರಸಾರವಾಗಿದ್ದವು. ಈ ಹಿನ್ನಲೆಯಲ್ಲಿ ಚಿತ್ರದ ಕುರಿತು ಅವರ ಅಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಟೀಮ್ ಇಂಡಿಯಾ ನಿಗದಿತ ಓವರ್ಗಳ ನಾಯಕ ಎಂ.ಎಸ್ ಧೋನಿ ಅವರ ಬಯೋಪಿಕ್ನಲ್ಲಿ ಅವರ ಅಣ್ಣ ನರೇಂದ್ರ ಸಿಂಗ್ ಧೋನಿಯವರ ಪ್ರಸ್ತಾಪವಿಲ್ಲದಿರುವುದಕ್ಕೆ ಅವರಣ್ಣ ಸ್ಪಷ್ಟನೆ ನೀಡಿದ್ದಾರೆ.
ಧೋನಿ ಆರಂಭದ ದಿನಗಳಲ್ಲಿ ಹಾಗೂ ಕ್ರಿಕೆಟ್ಗೆ ಸಂಬಂದಪಟ್ಟಂತೆ ತಾವು ಯಾವುದೇ ರೀತಿಯಲ್ಲಿ ಅವರಿಗೆ ಸಹಾಯ ಮಾಡಿಲ್ಲ. ಧೋನಿ ಕ್ರಿಕೆಟರ್ ಆಗುವುದರಲ್ಲಿ ನನ್ನ ಪಾತ್ರವೇನಿಲ್ಲ ಎಂದಿದ್ದಾರೆ.
ಧೋನಿ ತನ್ನ ಸ್ವಂತ ಶಕ್ತಿಯಿಂದ ಬೆಳೆದಿದ್ದಾರೆ. ಹಾಗಾಗಿ ನನ್ನ ಪ್ರಸ್ತಾಪ ಸಿನಿಮಾದಲಿಲ್ಲ, ಇದರಿಂದ ನನಗೆ ಯಾವುದೇ ನೋವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.