
ಕಲಬುರಗಿ(ಅ.06): ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವುದು ಖಚಿತ. ಎರಡೂ ಕಡೆ ಅಪಾರ ಸಾವು ನೋವು ಆಗುತ್ತದೆ. ಅಧರ್ಮದಿಂದ ನಡೆಯುತ್ತಿರುವ ದೇಶ ನಾಶವಾಗಿ ಹೋಗುತ್ತದೆ.
ಹೀಗೆಂದು ಭವಿಷ್ಯ ನುಡಿದವರು, ಕಲಬುರಗಿ ಜಿಲ್ಲೆಯ ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮ.
ಕರ್ನಾಟಕ ಆಂಧ್ರಪ್ರದೇಶದ ಗಡಿಯಲ್ಲಿರುವ ಯಾನಾಗುಂದಿ ಬೆಟ್ಟದಲ್ಲಿನ ಗುಹೆಯಲ್ಲಿ 12 ನೇ ವರ್ಷದಿಂದ ವಾಸವಾಗಿರುವ ಮಾತೆ ಮಾಣಿಕೇಶ್ವರಿ ಅನ್ನ ಆಹಾರವಿಲ್ಲದೇ ಕೇವಲ ಹಾಲು ಹಣ್ಣಿನ ಮೂಲಕ ಬದುಕಿ ವಿಸ್ಮಯ ಮೂಡಿಸಿದ ಮಾತೆ.
ವರ್ಷಕ್ಕೆ ಎರಡು ಬಾರಿ ಮಾತ್ರ ಭಕ್ತರಿಗೆ ದರ್ಶನ ಕೊಡುವ ಮಾತೆ ಮಾಣಿಕೇಶ್ವರಿ ಅಮ್ಮ ಯಾನಾಗುಂದಿಯ ತಮ್ಮ ಗುಹೆಯ ಬಳಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಭಾರತ-ಪಾಕ್ ನಡುವೆ ಯುದ್ಧ ನಡೆದೆ ನಡೆಯುತ್ತೇ, ಎರಡು ಕಡೆಯೂ ಅಪಾರ ಸಾವು ನೋವು ಸಂಭವಿಸುತ್ತೇ, ಅಧರ್ಮದಿಂದ ನಡೆಯುತ್ತಿರುವ ದೇಶ ನಾಶವಾಗುತ್ತೇ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.