ಭಾರತ-ಪಾಕ್ ನಡುವೆ ಯುದ್ಧ ನಡೆದೆ ನಡೆಯುತ್ತೇ, ಅಧರ್ಮದಿಂದ ನಡೆಯುತ್ತಿರುವ ದೇಶ ನಾಶವಾಗುತ್ತೇ..!

By Internet DeskFirst Published Oct 6, 2016, 5:10 AM IST
Highlights

ಕಲಬುರಗಿ(ಅ.06): ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುವುದು ಖಚಿತ. ಎರಡೂ ಕಡೆ ಅಪಾರ ಸಾವು ನೋವು ಆಗುತ್ತದೆ. ಅಧರ್ಮದಿಂದ ನಡೆಯುತ್ತಿರುವ ದೇಶ ನಾಶವಾಗಿ ಹೋಗುತ್ತದೆ.

ಹೀಗೆಂದು ಭವಿಷ್ಯ ನುಡಿದವರು, ಕಲಬುರಗಿ ಜಿಲ್ಲೆಯ ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮ. 

Latest Videos

ಕರ್ನಾಟಕ ಆಂಧ್ರಪ್ರದೇಶದ ಗಡಿಯಲ್ಲಿರುವ  ಯಾನಾಗುಂದಿ ಬೆಟ್ಟದಲ್ಲಿನ ಗುಹೆಯಲ್ಲಿ 12 ನೇ ವರ್ಷದಿಂದ ವಾಸವಾಗಿರುವ ಮಾತೆ ಮಾಣಿಕೇಶ್ವರಿ ಅನ್ನ ಆಹಾರವಿಲ್ಲದೇ ಕೇವಲ ಹಾಲು ಹಣ್ಣಿನ ಮೂಲಕ ಬದುಕಿ ವಿಸ್ಮಯ ಮೂಡಿಸಿದ  ಮಾತೆ. 

ವರ್ಷಕ್ಕೆ ಎರಡು  ಬಾರಿ ಮಾತ್ರ ಭಕ್ತರಿಗೆ ದರ್ಶನ ಕೊಡುವ ಮಾತೆ ಮಾಣಿಕೇಶ್ವರಿ ಅಮ್ಮ  ಯಾನಾಗುಂದಿಯ ತಮ್ಮ ಗುಹೆಯ ಬಳಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಭಾರತ-ಪಾಕ್ ನಡುವೆ ಯುದ್ಧ  ನಡೆದೆ ನಡೆಯುತ್ತೇ, ಎರಡು ಕಡೆಯೂ ಅಪಾರ ಸಾವು ನೋವು ಸಂಭವಿಸುತ್ತೇ, ಅಧರ್ಮದಿಂದ ನಡೆಯುತ್ತಿರುವ ದೇಶ ನಾಶವಾಗುತ್ತೇ ಎಂದಿದ್ದಾರೆ. 

click me!