ಡಿ.ಎಚ್. ಶಂಕರಮೂರ್ತಿ ತೆಲಂಗಾಣ ರಾಜ್ಯಪಾಲ?

Published : Jan 02, 2017, 03:23 AM ISTUpdated : Apr 11, 2018, 01:13 PM IST
ಡಿ.ಎಚ್. ಶಂಕರಮೂರ್ತಿ ತೆಲಂಗಾಣ ರಾಜ್ಯಪಾಲ?

ಸಾರಾಂಶ

ರಾಜ್ಯಪಾಲರನ್ನಾಗಿ ನೇಮಿಸುವ ಪ್ರಕ್ರಿ​ಯೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸದ್ಯ​ದಲ್ಲೇ ಪ್ರಕ್ರಿಯೆ ಪೂರ್ಣವಾಗಲಿದೆ. ರಾಜ್ಯ​ಪಾಲರ ನೇಮಕ ವಿಚಾರ ಈಗಾಗಲೇ ವಿಳಂಬವಾಗಿ​ರುವ ಹಿನ್ನೆಲೆಯಲ್ಲಿ ಈಗಾ​ಗಲೇ ಕೇಂದ್ರ ಗೃಹ ಇಲಾಖೆಯಲ್ಲಿ ಕಡತ ವಿಲೇ​ವಾರಿ​ಯಾಗಿದ್ದು, ಅಂತಿಮ ಆದೇಶ ಮಾತ್ರ ಬಾಕಿ ಇದೆ. 

ವಿಧಾನಪರಿಷತ್‌  ಸಭಾಪತಿ ಡಿ.ಎಚ್‌.ಶಂಕರ​ಮೂರ್ತಿ ಅವರನ್ನು ತೆಲಂಗಾಣ ಅಥವಾ ಪಾಂಡಿಚೇರಿ ರಾಜ್ಯಪಾಲರನ್ನಾಗಿ ಮಾಡಲು ಬಿಜೆಪಿ ನಿರ್ಧರಿಸಿದ್ದು, ಸದ್ಯದಲ್ಲೇ ನೇಮಕ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಮೂಲ​ಗಳು ತಿಳಿಸಿವೆ.
ರಾಜ್ಯಪಾಲರನ್ನಾಗಿ ನೇಮಿಸುವ ಪ್ರಕ್ರಿ​ಯೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಸದ್ಯ​ದಲ್ಲೇ ಪ್ರಕ್ರಿಯೆ ಪೂರ್ಣವಾಗಲಿದೆ. ರಾಜ್ಯ​ಪಾಲರ ನೇಮಕ ವಿಚಾರ ಈಗಾಗಲೇ ವಿಳಂಬವಾಗಿ​ರುವ ಹಿನ್ನೆಲೆಯಲ್ಲಿ ಈಗಾ​ಗಲೇ ಕೇಂದ್ರ ಗೃಹ ಇಲಾಖೆಯಲ್ಲಿ ಕಡತ ವಿಲೇ​ವಾರಿ​ಯಾಗಿದ್ದು, ಅಂತಿಮ ಆದೇಶ ಮಾತ್ರ ಬಾಕಿ ಇದೆ. 
ಗೃಹ ಸಚಿವ ರಾಜನಾಥ್‌ ಸಿಂಗ್‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಲಹೆಗೆ ಕಾಯುತ್ತಿದ್ದು, ನಂತರದಲ್ಲಿ ನೇಮಕ ಆದೇಶ ಹೊರ ಬೀಳಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ಸುವರ್ಣ ನ್ಯೂಸ್ ಸೋದರ ಪತ್ರಿಕೆ  ಕನ್ನಡ​ಪ್ರಭಗೆ ಪ್ರತಿಕ್ರಿಯಿಸಿ​ರುವ ಶಂಕಮೂರ್ತಿ ಅವರು, ಇತ್ತೀಚಿಗೆ ಪರಿ​ಷತ್‌ ಪ್ರತಿಪಕ್ಷ ನಾಯಕ ಈಶ್ವರಪ್ಪ ಅವ​ರೊಂದಿಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದೆ. ರಾಜ್ಯಪಾಲರ ನೇಮಕ ವಿಚಾರ​ದಲ್ಲಿ ವಿಳಂಬ​ವಾಗುತ್ತಿರುವ ಬಗ್ಗೆ ಪ್ರಸ್ತಾಪವೂ ಆಯಿತು. ತಡವಾಗಿರುವ ಬಗ್ಗೆ ರಾಜನಾಥ್‌ ಸಿಂಗ್‌ ಬೇಸರ ವ್ಯಕ್ತಪಡಿಸಿ​ದರು. ಅಲ್ಲದೆ ಸದ್ಯ​ದಲ್ಲೇ ನೇಮಕ ಮಾಡುವ ಭರವಸೆ ನೀಡಿ ದ್ದಾರೆ ಎಂದರು. ನನ್ನನ್ನು ರಾಜ್ಯಪಾಲರ​ನ್ನಾಗಿ ನೇಮಕ ಮಾಡು​​ವ ವಿಚಾರವಾಗಿ ಸಾಕಷ್ಟುಬಾರಿ ಸುದ್ದಿ​​ಗಳು ಹರಡಿದಾಗ ನನಗೆ ಆಸಕ್ತಿ ಹೆಚ್ಚಾ​ಗುತ್ತಿತ್ತು. ಆದರೆ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿದ ನಂತರ ಸ್ಪಷ್ಟವಾ​ಯಿತು. ಸದ್ಯ​​ದಲ್ಲೇ ರಾಜ್ಯ​ಪಾಲ​ರಾಗಿ ನನ್ನನ್ನು ನೇಮಿ​ಸುವ ಸಾಧ್ಯತೆ ಹೆಚ್ಚಾ​ಗಿದೆ ಎಂದು ಶಂಕರ​ಮೂರ್ತಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!