ಶೀಘ್ರದಲ್ಲಿ ದೇವೇಗೌಡರ ಜೀವನ ಚರಿತ್ರೆ ಬಿಡುಗಡೆ

Published : Sep 16, 2017, 05:59 PM ISTUpdated : Apr 11, 2018, 12:57 PM IST
ಶೀಘ್ರದಲ್ಲಿ ದೇವೇಗೌಡರ ಜೀವನ ಚರಿತ್ರೆ ಬಿಡುಗಡೆ

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆಯನ್ನು ಶಾಸಕ ವೈ.ಎಸ್.ವಿ. ದತ್ತಾ ರಚಿಸುತ್ತಿದ್ದಾರೆ. ಈ ಕೃತಿಯು ನವೆಂಬರ್ ಒಳಗೆ ಬಿಡುಗಡೆಯಾಗಲಿದೆ. ಸ್ವತಃ ಈ ವಿಷಯವನ್ನು ವೈ.ಎಸ್.ವಿ. ದತ್ತಾ ತಿಳಿಸಿದ್ದಾರೆ.

ಶಿವಮೊಗ್ಗ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆಯನ್ನು ಶಾಸಕ ವೈ.ಎಸ್.ವಿ. ದತ್ತಾ ರಚಿಸುತ್ತಿದ್ದಾರೆ.

ಈ ಕೃತಿಯು ನವೆಂಬರ್ ಒಳಗೆ ಬಿಡುಗಡೆಯಾಗಲಿದೆ. ಸ್ವತಃ ಈ ವಿಷಯವನ್ನು ವೈ.ಎಸ್.ವಿ. ದತ್ತಾ ತಿಳಿಸಿದ್ದಾರೆ.

ದೇವೇಗೌಡರ ರಾಜಕೀಯ ಜೀವನದಲ್ಲಿ ಎದುರಾದ ಸಮಸ್ಯೆಗಳು, ರಾಜಕೀಯ ಹೋರಾಟ, ರೈತರ ಬಗೆಗಿನ ಕಾಳಜಿ, ಕೆಲವು ಸನ್ನಿವೇಶಗಳಲ್ಲಿ ಎದುರಿಸಿದ ಘಟನೆಗಳು, ಇನ್ನು ಮುಂತಾದ ವಿಷಯಗಳ ಸಮಗ್ರ ವಾಸ್ತವಿಕ ಸತ್ಯವನ್ನು ಈ ಜೀವನ ಚರಿತ್ರೆ ಒಳಗೊಂಡಿರುತ್ತದೆ.

1973ರಿಂದಲೂ ಜನತಾ ಪರಿವಾರದಲ್ಲಿ ಹಾಗೂ ದೇವೇಗೌಡರ ಅನುಯಾಯಿಯಾಗಿ, ಬೆಂಬಲಿಗನಾಗಿ, ಒಡನಾಡಿಯಾಗಿ ರಾಜಕೀಯ ಜೀವನ ನಡೆಸುತ್ತಿದ್ದೇನೆ. ಇದೀಗ ಅವರ ಜೀವನ ಚರಿತ್ರೆ ಬರೆಯುತ್ತಿದ್ದು, ನವೆಂಬರ್ ವೇಳೆಗೆ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ರಾಜಕಾರಣ ಸೇರಿಕೊಂಡಿದೆ. ಹೀಗಾಗಿಯೇ ವಿಷಯ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಂದರು.

ಇದು ಪ್ರತ್ಯೇಕ ಧರ್ಮವಾಗಬೇಕು. ಕೇವಲ ವೀರಶೈವರು ಮಾತ್ರ ಈ ಧರ್ಮದಲ್ಲಿ ಇರಬಾರದು, ಬಸವಣ್ಣನವರ ಅನುಯಾಯಿಗಳು ಹಾಗೂ ವಚನಕಾರರು ಎಲ್ಲರೂ ಸಹ ವೀರಶೈವ ಧರ್ಮಕ್ಕೆ ಒಳಪಡುತ್ತಾರೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ