ರೈತ ಪ್ರತಿಭಟನೆ : ಪೊಲೀಸ್ ಪಿಸ್ತೂಲಿಗೆ ಗುರಿಯಾದ ವೃದ್ಧ?

Published : Oct 04, 2018, 02:02 PM IST
ರೈತ ಪ್ರತಿಭಟನೆ : ಪೊಲೀಸ್ ಪಿಸ್ತೂಲಿಗೆ ಗುರಿಯಾದ ವೃದ್ಧ?

ಸಾರಾಂಶ

ದಿಲ್ಲಿಯಲ್ಲಿ ಗಾಂಧಿ ಜಯಂತಿಯನ್ನು ರೈತರ ಪ್ರತಿಭಟನೆ ನಡೆಸಿದ್ದು ಈ ವೇಳೆಯದ್ದೇ ಎನ್ನಲಾದ ಅನೇಕ ಫೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗೆಗಿನ ಸತ್ಯಾತ್ಯತೆ ಇಲ್ಲಿದೆ. 

ಬೆಂಗಳೂರು :  ದಿಲ್ಲಿಯಲ್ಲಿ ಗಾಂಧಿ ಜಯಂತಿಯಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಬಳಿಕ ಇದೀಗ ಅನೇಕ ಚಿತ್ರಗಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಅಂತದ್ದೇ ಒಂದು ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ  ಇದೀಗ ವೃದ್ಧನೋರ್ವ ಪೊಲೀಸರತ್ತ ಇಟ್ಟಿಗೆ ಬೀಸುತ್ತಿದ್ದು ಆತನಿಗೆ ಪೊಲೀಸ್ ಓರ್ವರು ಪಿಸ್ತೂಲ್ ಗುರಿಯಾಗಿಸಿಕೊಂಡಿದ್ದಾರೆ. 

ಇದನ್ನು ಅನೇಕರು ಟ್ವೀಟ್ ಮಾಡಿದ್ದು, ಕಾಶ್ಮೀರಿ ಕಲ್ಲು ತೂರಾಟಗಾರರಂತೆ ಅವರಿಗೆ ಪಿಸ್ತೂಲ್ ಗುರಿ ಇಡುವ  ಮುನ್ನ ಅವರ ಬಗ್ಗೆ ಒಮ್ಮೆ ಯೋಚಿಸಿ ಎಂದು ಎಂದು ಬರೆದುಕೊಂಡಿದ್ದಾರೆ. 

ಆದರೆ ಇದರ ಸತ್ಯಾಸತ್ಯತೆಯನ್ನು ಪರೀಕ್ಷೆ ಮಾಡಿದಾಗ  ಇದು 2013ರ ಚಿತ್ರ ಎಂದು ತಿಳಿದು ಬಂದಿದೆ.  ಮೀರತ್ ನ ಮಹಾಪಂಚಾಯತ್ ನಲ್ಲಿ  ಪೊಲೀಸರು ಹಾಗೂ ಇಲ್ಲಿನ ಜನರ ನಡುವೆ ಘರ್ಷಣೆ ನಡೆದಾಗಿನ ಫೊಟೋ ಎನ್ನುವುದು ತಿಳಿದು ಬಂದಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!