ದಿಲ್ಲಿ ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ಭರ್ಜರಿ ಜಯ; ಕೇಜ್ರಿವಾಲ್'ಗೆ ಹೀನಾಯ ಸೋಲು?

Published : Apr 23, 2017, 02:11 PM ISTUpdated : Apr 11, 2018, 12:47 PM IST
ದಿಲ್ಲಿ ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ಭರ್ಜರಿ ಜಯ; ಕೇಜ್ರಿವಾಲ್'ಗೆ ಹೀನಾಯ ಸೋಲು?

ಸಾರಾಂಶ

ಏಪ್ರಿಲ್ 26ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತದಾರ ಬರೆದ ನಿಜವಾದ ಭವಿಷ್ಯ ಅಂದು ಅನಾವರಣಗೊಳ್ಳಲಿದೆ.

ನವದೆಹಲಿ(ಏ. 23): ಪಂಚರಾಜ್ಯ ಚುನಾವಣೆ ಬಳಿಕ ಅತೀ ಹೆಚ್ಚು ಕುತೂಹಲ ಮೂಡಿಸಿದ್ದ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಇಂದು ಮತದಾನವಾಗಿದೆ. ಶೇ.50-55ರಷ್ಟು ಮತದಾನವಾಗಿರುವ ಮಾಹಿತಿ ಸದ್ಯಕ್ಕೆ ಲಭಿಸಿದೆ. ಒಟ್ಟು 272 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆಗಳೂ ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಪೂರ್ಣಬಹುಮತ ದೊರಕುವ ಸೂಚನೆ ನೀಡಿವೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳಿಗೆ ಮುಖಭಂಗವಾಗುವ ಅಂದಾಜಿದೆ.

ಆಕ್ಸಿಸ್-ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ 272 ಕ್ಷೇತ್ರಗಳ ಪೈಕಿ ಬಿಜೆಪಿ 202-220 ಸ್ಥಾನಗಳನ್ನ ಗೆಲ್ಲಬಹುದು. ಆಪ್ 23-35, ಕಾಂಗ್ರೆಸ್ 19-31 ಸ್ಥಾನಗಳನ್ನು ಪಡೆಯಬಹುದೆನ್ನಲಾಗಿದೆ. ಇನ್ನು, ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ, ಬಿಜೆಪಿ 218 ಸ್ಥಾನಗಳನ್ನು ಗೆದ್ದು ಪಾಲಿಕೆಯ ಅಧಿಕಾರವನ್ನು ಮತ್ತೊಮ್ಮೆ ಹಿಡಿಯಬಹುದು.

ಏಪ್ರಿಲ್ 26ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತದಾರ ಬರೆದ ನಿಜವಾದ ಭವಿಷ್ಯ ಅಂದು ಅನಾವರಣಗೊಳ್ಳಲಿದೆ.

ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ (ಒಟ್ಟು ಸ್ಥಾನ: 272):

ಆ್ಯಕ್ಸಿಸ್-ಇಂಡಿಯಾ ಟುಡೇ ಸಮೀಕ್ಷೆ:
ಬಿಜೆಪಿ: 202-220
ಎಎಪಿ: 23-35
ಕಾಂಗ್ರೆಸ್: 19-31
ಇತರೆ: 2-8

ಎಬಿಪಿ ನ್ಯೂಸ್ ಸಮೀಕ್ಷೆ:
ಬಿಜೆಪಿ: 218
ಎಎಪಿ: 24
ಕಾಂಗ್ರೆಸ್: 22
ಇತರೆ: 5

2012ರ ಚುನಾವಣೆಯಲ್ಲಿ ಏನಿತ್ತು ಫಲಿತಾಂಶ?
ಬಿಜೆಪಿ: 142
ಕಾಂಗ್ರೆಸ್: 77
ಬಿಎಸ್'ಪಿ: 15
ಇತರೆ: 38

ಭಾರತೀಯ ಜನತಾ ಪಕ್ಷ ಈ ಹಿಂದೆ ಸತತ ಎರಡು ಬಾರಿ ಪಾಲಿಕೆ ಗದ್ದುಗೆ ಹಿಡಿದುಕೊಂಡಿದೆ. ಈ ಬಾರಿ ಗೆದ್ದರೆ ಕೇಸರಿ ಪಾಳಯಕ್ಕೆ ಹ್ಯಾಟ್ರಿಕ್ ಗೌರವ ಲಭಿಸಲಿದೆ.

ದಿಲ್ಲಿಯ ರಾಜಕಾರಣಕ್ಕೆ ಆಮ್ ಆದ್ಮಿ ಪಕ್ಷವು ಕೆಲ ವರ್ಷಗಳ ಹಿಂದೆ ದಿಢೀರ್ ಬಿರುಗಾಳಿಯಂತೆ ಆಗಮಿಸಿದೆ. ಎಲ್ಲರೂ ನೋಡನೋಡುತ್ತಿದ್ದಂತೆಯೇ ರಾಜ್ಯದ ಅಧಿಕಾರ ಹಿಡಿದುಕೊಂಡೇ ಬಿಟ್ಟಿತ್ತು. ಜನರಿಗೆ ಹೊಸ ಆಶಾಕಿರಣ ಮೂಡಿಸುವ ಭರವಸೆ ನೀಡಿದ್ದ ಆಮ್ ಆದ್ಮಿಯು ಜನರ ನಿರೀಕ್ಷೆಯನ್ನು ಉಳಿಸಿಕೊಂಡಿದೆಯೋ ಇಲ್ಲವೋ ಎಂಬುದು ಇವತ್ತಿನ ಎಂಸಿಡಿ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!