ಶರದ್ ಯಾದವ್ ಅನರ್ಹ: ಮಧ್ಯಾಂತರ ತಡೆ ನೀಡಲು ಕೋರ್ಟ್ ನಕಾರ

Published : Dec 15, 2017, 07:31 PM ISTUpdated : Apr 11, 2018, 12:36 PM IST
ಶರದ್ ಯಾದವ್ ಅನರ್ಹ: ಮಧ್ಯಾಂತರ ತಡೆ ನೀಡಲು ಕೋರ್ಟ್ ನಕಾರ

ಸಾರಾಂಶ

. ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳನ್ನು ನಡೆಸಿದ ಪರಿಣಾಮ ಪಕ್ಷದ ಅಧ್ಯಕ್ಷರಾದ ನಿತೀಶ್ ಕುಮಾರ್ ಶರದ್ ಯಾದವ್ ಹಾಗೂ ಅನ್ವರ್ ಅಲಿ ಅವರನ್ನು ಡಿ.4 ರಂದು ಉಚ್ಚಾಟಿಸಲಾಗಿದೆ

ನವದೆಹಲಿ(ಡಿ.15): ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಅವರ ರಾಜ್ಯಸಭಾ ಸದಸ್ಯತ್ವ ಅನರ್ಹತೆಗೆ ಮಧ್ಯಾಂತರ ತಡೆ ನೀಡಲು ದೆಹಲಿ ಕೋರ್ಟ್ ನಿರಾಕರಿಸಿದೆ.

ಆದಾಗ್ಯೂ ಯಾದನ್ ಅವರಿಗೆ ಡಿಎ, ಇತರೆ ಭತ್ಯೆ ಹಾಗೂ ಸಂಸದರ ಬಂಗಲೆ ನೀಡಲು ಅನುಮತಿ ನ್ಯಾಯಮೂರ್ತಿ ವಿಭು ಬಾಕ್ರು ಅನುಮತಿ ನೀಡಿದ್ದು, ಆದರೆ ಜನವರಿ 5ರ ತನಕ ನಡೆಯುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳದಿರಲು ತಡೆ ನೀಡಿದೆ.

ಯಾದವ್ ಅವರ ಅರ್ಜಿ'ಗೆ ಸಂಬಂಧಿಸಿದಂತೆ ಜೆಡಿಯು ರಾಜ್ಯಸಭಾ ನಾಯಕರಾದ ರಾಮ್'ಚಂದ್ರ ಪ್ರಸಾದ್ ಸಿಂಗ್ ಅವರಿಗೆ  ಪ್ರತಿಕ್ರಿಯೆ ನೀಡಲು ಕೋರ್ಟ್ ಸೂಚನೆ ನೀಡಿದೆ. ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳನ್ನು ನಡೆಸಿದ ಪರಿಣಾಮ ಪಕ್ಷದ ಅಧ್ಯಕ್ಷರಾದ ನಿತೀಶ್ ಕುಮಾರ್ ಶರದ್ ಯಾದವ್ ಹಾಗೂ ಅನ್ವರ್ ಅಲಿ ಅವರನ್ನು ಡಿ.4 ರಂದು ಉಚ್ಚಾಟಿಸಲಾಗಿದೆ. ಯಾದವ್ ಅವರು ಉಚ್ಚಾಟನೆ ಕ್ರಮವನ್ನು ಅನೈತಿಕ ಎಂದು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ