
ನವದೆಹಲಿ (ಅ.11):ಈ ಬಾರಿ ದಸರಾವನ್ನು ರಾಷ್ಟ್ರ ರಾಜಧಾನಿ ವಿನೂತನವಾಗಿ ಆಚರಿಸಲಿದೆ.
ಕೆಲ ದಿನಗಳಿಂದ ಚಿಕೂನ್ ಗುನ್ಯಾ, ಡೆಂಗ್ಯೂವಿನಿಂದ ಬಳಲುತ್ತಿದ್ದ ದೆಹಲಿ ಇದೀಗ ದಸರಾದಲ್ಲಿ ಅದನ್ನು ಹೊಡೆದೋಡಿಸುವ ಪ್ರತೀಕವಾಗಿ ಪ್ರತಿಕೃತಿ ದಹನ ಮಾಡಲಿದೆ. ಚಿಕೂನ್ ಗುನ್ಯಾ ಪ್ರತೀಕ ಎನ್ನಲಾಗುವ ರಾವಣ, ಮಲೇರಿಯಾ ಪ್ರತೀಕ ಎನ್ನಲಾಗುವ ಕುಂಭಕರ್ಣ ಹಾಗೂ ಡೆಂಗ್ಯೂ ಪ್ರತೀಕ ಎನ್ನಲಾಗುವ ಮೇಘನಾಡ್ ಪ್ರತಿಕೃತಿಯನ್ನು ದಸರಾದಲ್ಲಿ ದಹಿಸಲಿದ್ದಾರೆ.
ಎಂದಿನಂತೆ 45 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ರಾಮಲೀಲಾ ಮೈದಾನದಲ್ಲಿ ಈ ಬಾರಿಯೂ ನವಯುವಕ್ ರಾಮಲೀಲಾ ಸಮಿತಿ ಆಚರಿಸಲಿದೆ. ಇಂದು ರಾತ್ರಿ 8 ಗಂಟೆಗೆ ಪ್ರತಿಕೃತಿ ದಹಿಸಲಾಗುತ್ತದೆ.
ಯಾವುದೇ ರಾಜಕೀಯವಿಲ್ಲದೇ ದೆಹಲಿಯು ಈ ದುಷ್ಟ ರೋಗಗಳ ವಿರುದ್ಧ ಹೋರಾಡಲಿದೆ ಎನ್ನುವುದಕ್ಕಾಗಿ ರಾವಣನ ಆಕೃತಿಯನ್ನು ದಹಿಸಲಾಗುತ್ತಿದೆ ಎಂದು ರಾಮಲೀಲಾ ಸಮಿತಿಯ ಸಂಸ್ಥಾಪಕ ಜತ್ತೇದಾರ್ ಅವತಾರ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.