
ನವದೆಹಲಿ: ತೆರಿಗೆದಾರು ತಮ್ಮ ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆ ಜತೆ ಸಂಯೋಜನೆ ಮಾಡಲು ನೀಡಲಾಗಿರುವ ಗಡುವು ಆ.31ಕ್ಕೆ ಕೊನೆಗೊಳ್ಳಲಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಹೇಳಿದೆ.
ಸುಪ್ರೀಂ ಕೋರ್ಟ್ ಖಾಸಗಿತನದ ಹಕ್ಕು ವಿಚಾರವಾಗಿ ಗುರುವಾರ ನೀಡಿರುವ ತೀರ್ಪು ಪ್ಯಾನ್- ಆಧಾರ್ ಸಂಯೋಜನೆಗೆ ಅನ್ವಯವಾಗುವುದಿಲ್ಲ, ಆದುದರಿಂದ ಈ ಹಿಂದೆ ನೀಡಲಾಗಿರುವ ಗಡುವು (ಆ.31) ಹಾಗೇಯೇ ಇರಲಿದೆ ಎಂದು ಪ್ರಾಧಿಕಾರದ ಸಿಇಓ ಅಜಯ್ ಭೂಷಣೆ ಹೇಳಿದ್ದಾರೆ.
ಜತೆಗೆ, ಇತರ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಉಲ್ಲೇಖಿಸುವುದು ಕೂಡಾ ಎಂದಿನಂತೆ ಮುಂದುವರಿಯಲಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಪ್ಯಾನ್ ಕಾರ್ಡ್’ನ್ನು ಕಡ್ಡಾಯವಾಗಿ ಆಧಾರ್ ಜತೆ ಲಿಂಕ್ ಮಾಡಬೇಕು ಎಂದು ಸರ್ಕಾರವು ತೆರಿಗೆದಾರರಿಗೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.