ಬೀದರ್ ವಸತಿ ಶಾಲೆ ಮಕ್ಕಳಿಗೆ ‘ಇಲಿಯೂಟ’; 7 ವಿದ್ಯಾರ್ಥಿಗಳು ಆಸ್ಪತ್ರೆಗೆ

Published : Jan 31, 2017, 10:50 AM ISTUpdated : Apr 11, 2018, 12:38 PM IST
ಬೀದರ್ ವಸತಿ ಶಾಲೆ ಮಕ್ಕಳಿಗೆ ‘ಇಲಿಯೂಟ’; 7 ವಿದ್ಯಾರ್ಥಿಗಳು ಆಸ್ಪತ್ರೆಗೆ

ಸಾರಾಂಶ

ಈ ಹಾಸ್ಟೆಲ್​​​​’ನಲ್ಲಿ ನಿನ್ನೆ ರಾತ್ರಿಯ ಊಟದಲ್ಲಿ ಇಲಿ ಪತ್ತೆಯಾಗಿದೆ. ವಿದ್ಯಾರ್ಥಿಗಳು ಮಾಡುತ್ತಿದ್ದ ವೇಳೆಯಲ್ಲಿ, ಪವನ್​​ ಎಂಬಾತನ ತಟ್ಟೆಯಲ್ಲಿ ಅನ್ನ ಮತ್ತು ಸಾರು ಹಾಕಿಕೊಂಡಿದ್ದಾನೆ, ಆಗ ಸತ್ತ ಇಲಿ ಪತ್ತೆಯಾಗಿದೆ.

ಬೀದರ್ (ಜ.31): ಸರ್ಕಾರಿ ವಸತಿ ಶಾಲೆಯ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಅಲ್ಲದೇ ಈ ಊಟ ಮಾಡಿದ 7 ಜನ ವಿದ್ಯಾರ್ಥಿಗಳಿಗೆ ವಾಂತಿ ಭೇದಿ ಶುರುವಾಗಿದೆ.

ಬೀದರ್​​ ಜಿಲ್ಲೆಯ ಹುಮ್ನಾಬಾದ್​​ ತಾಲೂಕಿನ ದುಬಲಗುಂಡಿ ಗ್ರಾಮದ ಸರ್ಕಾರಿ ಮೆಟ್ರಿಕ್​​ ಬಾಲಕರ ವಸತಿ ಶಾಲೆಯ್ಲಲಿ ಈ ಘಟನೆ ನಡೆದಿದೆ.

ಈ ಹಾಸ್ಟೆಲ್​​​​’ನಲ್ಲಿ ನಿನ್ನೆ ರಾತ್ರಿಯ ಊಟದಲ್ಲಿ ಇಲಿ ಪತ್ತೆಯಾಗಿದೆ. ವಿದ್ಯಾರ್ಥಿಗಳು ಮಾಡುತ್ತಿದ್ದ ವೇಳೆಯಲ್ಲಿ, ಪವನ್​​ ಎಂಬಾತನ ತಟ್ಟೆಯಲ್ಲಿ ಅನ್ನ ಮತ್ತು ಸಾರು ಹಾಕಿಕೊಂಡಿದ್ದಾನೆ, ಆಗ ಸತ್ತ ಇಲಿ ಪತ್ತೆಯಾಗಿದೆ.

ಬಳಿಕ 7 ವಿದ್ಯಾರ್ಥಿಗಳು ವಾಂತಿ ಮಾಡಲು ಆರಂಭಿಸಿದ್ದಾರೆ. ವಿಷಯ ತಿಳಿದ ವಸತಿ ಶಾಲೆ ವಾರ್ಡನ್ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾನೆ. ಮಕ್ಕಳಿಗೆ ಮಾತ್ರೆ ಕೊಟ್ಟು ಸುಮ್ಮನಾಗಿದ್ದಾನೆ.

ಅಸ್ವಸ್ಥಗೊಂಡ ಮಕ್ಕಳ ಪರಿಸ್ಥಿತಿ ಸುಧಾರಿಸಿಲ್ಲ, ಹೀಗಾಗಿ ಗ್ರಾಮಸ್ಥರು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!