ಹುತಾತ್ಮ ಸಂದೀಪ್ ತಾಯಿಗೆ ಕೈ ತುತ್ತಿಟ್ಟ ಜಿಲ್ಲಾಧಿಕಾರಿ

Published : Jan 29, 2017, 02:59 PM ISTUpdated : Apr 11, 2018, 12:38 PM IST
ಹುತಾತ್ಮ ಸಂದೀಪ್ ತಾಯಿಗೆ ಕೈ ತುತ್ತಿಟ್ಟ ಜಿಲ್ಲಾಧಿಕಾರಿ

ಸಾರಾಂಶ

ಸೇನಾಧಿಕಾರಿಗಳೊಂದಿಗೆ ಸಂಪರ್ಕಿಸಿ ಪಾರ್ಥಿವ ಶರೀರ ತರಿಸಿಕೊಡುವಂತೆ ಸಂದೀಪ್​ ಸೋದರಿ ಸುಮ, ಎಸ್ಪಿ ಬಳಿ ಮನವಿ ಮಾಡಿಕೊಂಡರು. ಮನವಿಗೆ ಒಪ್ಪಿದ ಎಸ್.​​ಪಿ ಪೊಲೀಸ್​ ಇಲಾಖೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

ಹಾಸನ (ಜ.29): ಜಮ್ಮು ಕಾಶ್ಮೀರದ ಹಿಮಪಾತದಲ್ಲಿ ಹುತಾತ್ಮರಾದ ವೀರ ಕನ್ನಡಿಗ ಯೋಧ ಸಂದೀಪ್ ಮನೆಗೆ, ಕೊನೆಗೂ ಹಾಸನ ಜಿಲ್ಲಾಧಿಕಾರಿ ಮತ್ತು ಎಸ್.ಪಿ ಭೇಟಿ ನೀಡಿದ್ದಾರೆ.

ಜಿಲ್ಲಾಧಿಕಾರಿ ವಿ.ಚೈತ್ರಾ ಎರಡು ದಿನಗಳಿಂದ ಊಟ ಬಿಟ್ಟಿದ್ದ ಸಂದೀಪ್ ತಾಯಿಗೆ, ಊಟ ಮಾಡಿಸಿ ಸಾಂತ್ವನ ಹೇಳಿದರು.

ಡಿ.ಸಿ. ಬಳಿ ಕಣ್ಣೀರು ಹಾಕಿ ಕಷ್ಟ ಹೇಳಿಕೊಂಡ ತಾಯಿ ಗಂಗಮ್ಮರಿಗೆ, ಸರ್ಕಾರದಿಂದ ಎಲ್ಲಾ ನೆರವು ನೀಡುವುದಾಗಿ ಡಿಸಿ ಚೈತ್ರಾ ಭರವಸೆ ನೀಡಿದರು.

ಸಂದೀಪ್​ ತಂದೆ ಪುಟ್ಟರಾಜು, ತಾಯಿ ಗಂಗಮ್ಮ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಸೇನಾಧಿಕಾರಿಗಳೊಂದಿಗೆ ಸಂಪರ್ಕಿಸಿ ಪಾರ್ಥಿವ ಶರೀರ ತರಿಸಿಕೊಡುವಂತೆ ಸಂದೀಪ್​ ಸೋದರಿ ಸುಮ, ಎಸ್ಪಿ ಬಳಿ ಮನವಿ ಮಾಡಿಕೊಂಡರು. ಮನವಿಗೆ ಒಪ್ಪಿದ ಎಸ್.​​ಪಿ ಪೊಲೀಸ್​ ಇಲಾಖೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ
ತಾಕತ್ತಿದ್ರೆ ನೋಟಲ್ಲಿರುವ ಗಾಂಧಿ ಚಿತ್ರ ತೆಗೆಯಿರಿ: ಕೇಂದ್ರಕ್ಕೆ ಡಿಕೆಶಿ ಸವಾಲು!