26 ವರ್ಷ ಸಿಕ್ಕಿಂ ಆಳಿದ್ದ ಎಸ್‌ಡಿಎಫ್‌ ಎರಡು ದಿನದಲ್ಲಿ ಖಾಲಿ ಖಾಲಿ!

Published : Aug 15, 2019, 10:47 AM IST
26 ವರ್ಷ ಸಿಕ್ಕಿಂ ಆಳಿದ್ದ ಎಸ್‌ಡಿಎಫ್‌ ಎರಡು ದಿನದಲ್ಲಿ ಖಾಲಿ ಖಾಲಿ!

ಸಾರಾಂಶ

26 ವರ್ಷ ಸಿಕ್ಕಿಂ ಆಳಿದ್ದ ಎಸ್‌ಡಿಎಫ್‌ ಎರಡು ದಿನದಲ್ಲಿ ಖಾಲಿ ಖಾಲಿ!| ಎಸ್‌ಡಿಎಫ್‌ನ ಮತ್ತಿಬ್ಬರು ಶಾಸಕರು ಎಸ್‌ಕೆಎಂಗೆ ಸೇರ್ಪಡೆ| 10 ಶಾಸಕರು ಮಂಗಳವಾರ ದೆಹಲಿಯಲ್ಲಿ ಬಿಜೆಪಿ ಸೇರಿ​ದ್ದ​ರು|  ಪಕ್ಷ​ದಲ್ಲಿ ಈಗ ಮಾಜಿ ಸಿಎಂ ಚಾಮ್ಲಿಂಗ್‌ ಮಾತ್ರವೇ ಬಾಕಿ

ಗ್ಯಾಂಗ್ಟ​ಕ್‌[ಆ.15]: ಸಿಕ್ಕಿಂ ಎಂಬ ಈಶಾ​ನ್ಯದ ಪುಟ್ಟರಾಜ್ಯ​ವನ್ನು ಬರೋ​ಬ್ಬರಿ ಎರಡೂವರೆ ದಶ​ಕ​ಗಳ ಕಾಲ ಅಳಿದ್ದ ಸಿಕ್ಕಿಂ ಡೆಮೊ​ಕ್ರಾ​ಟಿ​ಕ್‌ ಫ್ರಂಟ್‌ (ಎ​ಸ್‌​ಡಿ​ಎ​ಫ್‌) ಕೇವಲ ಎರಡೇ ದಿನ​ದಲ್ಲಿ ಖಾಲಿ ಖಾಲಿ​ಯಾ​ಗಿದೆ. ಮಂಗ​ಳ​ವಾ​ರಷ್ಟೇ ಪಕ್ಷದ 10 ಜನ ಶಾಸ​ಕರು ಪಕ್ಷ​ಕ್ಕೆ ಗುಡ್‌ ಬೈ ಹೇಳಿ ಬಿಜೆಪಿ ಸೇರಿ​ದ್ದರು. ಇದಾದ ಮರು​ದಿ​ನವೇ ಇಬ್ಬರು ಶಾಸ​ಕರು ಪಕ್ಷ ತೊರೆ​ದಿದ್ದು, ಆಡ​ಳಿತಾರೂಢ ಸಿಕ್ಕಿಂ ಕ್ರಾಂತಿ​ಕಾರಿ ಮೋರ್ಚಾ (ಎ​ಸ್‌​ಕೆ​ಎಂ) ಪಕ್ಷಕ್ಕೆ ಸೇರಿ​ದ್ದಾರೆ. ಅಲ್ಲಿಗೆ 13 ಶಾಸ​ಕರ ಪೈಕಿ 12 ಮಂದಿ ಗುಳೆ ಹೋಗಿದ್ದು, ಪಕ್ಷದ ಅಧ್ಯಕ್ಷ ಹಾಗೂ 26 ವರ್ಷ ಸಿಕ್ಕಿಂನ ಮುಖ್ಯ​ಮಂತ್ರಿ​ಯಾ​ಗಿದ್ದ ಪವನ್‌ ಕುಮಾರ್‌ ಚಾಮ್ಲಿಂಗ್‌ ಮಾತ್ರ ಪಕ್ಷದಲ್ಲಿ ಬಾಕಿ​ಯಾ​ಗಿ​ದ್ದಾರೆ.

ನಾವು ಆಡ​ಳಿ​ರೂಢ ಎಸ್‌​ಕೆ​ಎಂನ ನೇತೃತ್ವ ಹಾಗೂ ಅಜೆಂಡಾ​ಗ​ಳನ್ನು ಒಪ್ಪಿ​ಕೊಂಡು ಪಕ್ಷ ಸೇರಿ​ದ್ದೇವೆ. ಸದ್ಯ ಸ್ಥಳೀಯರ ಹಿತಾ​ಸ​ಕ್ತಿ​ಗ​ಳನ್ನು ಎತ್ತಿ ಹಿಡಿ​ಯಲು ಪ್ರಾದೇ​ಶಿಕ ಪಕ್ಷ​ವಾಗಿ ಎಸ್‌ಕೆಂ ಮಾತ್ರ ಉಳಿ​ದಿದೆ. ಸೋಮ​ವಾರ 10 ಮಂದಿ ಶಾಸ​ಕರು ಬಿಜೆ​ಪಿಗೆ ಸೇರಿ​ದ್ದರು. ಹಾಗಾ​ಗಿ ನಾವಿ​ಬ್ಬರು ಮಾತು​ಕತೆ ನಡೆಸಿ ಎಸ್‌​ಕೆಎಂ ಸೇರಿ​ದ್ದೇವೆ ಎಂದು ಇಬ್ಬರು ಶಾಸ​ಕರು ಹೇಳಿ​ದ್ದಾರೆ. ಇವ​ರಿ​ಬ್ಬರ ಸೇರ್ಪ​ಡೆ​ಯಿಂದ ಶಾಸನ ಸಭೆ​ಯಲ್ಲಿ ಎಸ್‌​ಕೆಎಂ ಬಲ 18 ಕ್ಕೇರಿದೆ. ಈ ಕ್ಷಿಪ್ರ ಬೆಳ​ವ​ಣಿ​ಗೆ​ಯಿಂದ ಸಿಕ್ಕಿಂ ನಲ್ಲಿ ಒಂದೂ ಸೀಟು ಗೆಲ್ಲದ ಬಿಜೆಪಿ ಅತೀ ದೊಡ್ಡ ವಿರೋಧ ಪಕ್ಷ​ವಾಗಿ ಹೊರ​ಹೊ​ಮ್ಮಿದ್ದು, ಅಧೀ​ಕೃತ ವಿರೋಧ ಪಕ್ಷ​ವಾ​ಗಿದ್ದ ಎಸ್‌​ಡಿ​ಎಫ್‌ ನ ಸಂಖ್ಯಾ​ಬಲ ಕೇವಲ 1 ಕ್ಕೆ ಕುಸಿ​ದಿ​ದೆ.

ಒಂದೂ ಸ್ಥಾನ ಗೆಲ್ಲದ ಬಿಜೆಪಿಗೆ ಈಗ ವಿಪಕ್ಷ ಸ್ಥಾನಮಾನ!

ಒಟ್ಟು 32 ಸಂಖ್ಯಾ​ಬಲ ಇರುವ ಇರುವ ಸಿಕ್ಕಿ ವಿಧಾನ ಸಭೆ​ಗೆ, ಕಳೆದ ಮೇನಲ್ಲಿ ನಡೆದ ಚುನಾ​ವ​ಣೆ​ಯಲ್ಲಿ ಎಸ್‌​ಕೆಎಂ 17 ಹಾಗೂ ಎಸ್‌​ಡಿ​ಎಫ್‌ 15 ಕ್ಷೇತ್ರ​ಗ​ಳಲ್ಲಿ ಗೆಲುವು ಸಾಧಿ​ಸಿ​ತ್ತು. ಎಸ್‌​ಡಿ​ಎ​ಫ್‌ನ ಇಬ್ಬರು ಎರಡು ಕ್ಷೇತ್ರ​ಗ​ಳಲ್ಲಿ ಗೆದ್ದಿ​ದ್ದ​ರಿಂದ ಒಂದು ಕ್ಷೇತ್ರಕ್ಕೆ ರಾಜೀ​ನಾಮೆ ನೀಡಿ​ದ್ದರು. ಹಾಗಾಗಿ ಎಸ್‌​ಕೆಎಂ ಬಲ 13 ಕ್ಕೆ ಕುಸಿ​ದಿತ್ತು. ಈಗ ಎಲ್ಲಾ ಶಾಸ​ಕರ ವಲ​ಸೆ​ಯಿಂದಾಗಿ ಕೇವಲ 1 ಕ್ಕೆ ಇಳಿ​ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ ಹಲವೆಡೆ ಇಂದು ಪವರ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ