
ಬೆಂಗಳೂರು(ಸೆ.20): ಈ ಬಾರಿಯ ದಸರಾ ರಜೆಯನ್ನು 4 ದಿನಗಳ ಕಾಲ ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಂದು ಬೆಂಗಳೂರಿನಲ್ಲಿ ಸುವರ್ಣನ್ಯೂಸ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ರಾಜ್ಯದಲ್ಲಿ ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಈಗಾಗಲೇ 9 ದಿನ ರಜೆ ಘೋಷಿಸಿದ್ದೇವೆ. ಹೀಗಾಗಿ, ಈ ಬಾರಿಯ ಶೈಕ್ಷಣಿಕ ಪಠ್ಯಗಳು ಪೂರ್ಣವಾಗಿಲ್ಲ. ಇನ್ನು ದಸರಾ ರಜೆಯನ್ನು ಮುಂದಿನ ತಿಂಗಳು 8 ರಿಂದ 27ರವರೆಗೂ ನೀಡಲು ಮುಂಚೆಯೇ ನಿರ್ಧರಿಸಿದ್ವೀ. ಆದ್ರೆ ಇದೀಗ ರಜೆಯನ್ನು 8 ರಿಂದ 23ರವರೆಗೆ ಮಾತ್ರ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದ್ದು, 4 ದಿನ ದಸರಾ ಕಡಿತವಾಗಿದೆ. ಇನ್ನು ಈಗಾಗಲೇ ಕೆಲ ಶಾಲೆಗಳು ಶನಿವಾರದಂದು ಪೂರ್ಣ ಕೆಲಸ ಮಾಡುತ್ತಿದೆ. ಆದ್ರೂ ಕೂಡ ದಸರಾ ರಜೆಯನ್ನು 4 ದಿನ ಕಡಿತಗೊಳಿಸಲಾಗಿದ್ದು, ಮುಂದಿನ ತಿಂಗಳು 23ರಿಂದ ಶಾಲೆಗಳು ಆರಂಭವಾಗಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.