ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್; ಗಲ್ಲುಶಿಕ್ಷೆ ರದ್ದು

Published : Sep 04, 2017, 04:47 PM ISTUpdated : Apr 11, 2018, 12:43 PM IST
ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್; ಗಲ್ಲುಶಿಕ್ಷೆ ರದ್ದು

ಸಾರಾಂಶ

ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿ ಇಡೀ ಮನೆಯನ್ನ ದೋಚುತ್ತಿದ್ದ ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್ ದೊರೆತಿದೆ.

ಬೆಂಗಳೂರು (ಸೆ.04): ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕೊಲೆ ಮಾಡಿ ಇಡೀ ಮನೆಯನ್ನ ದೋಚುತ್ತಿದ್ದ ದಂಡುಪಾಳ್ಯ ಹಂತಕರಿಗೆ ಕೊಂಚ ರಿಲೀಫ್ ದೊರೆತಿದೆ.

1999 ರಲ್ಲಿ ಬೆಂಗಳೂರಿನ ಸುಧಾಮಣಿ ಕೊಲೆ ಪ್ರಕರಣಕ್ಕೆ ಅಧೀನ ನ್ಯಾಯಾಲಯ ಈ ಹಿಂದೆಯೇ ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಈ ಆದೇಶವನ್ನ ಪ್ರಶ್ನಿಸಿ, ಹೈ ಕೊರ್ಟ್ ಮೊರೆ ಹೋಗಿದ್ದ, ದಂಡು ಪಾಳ್ಯ ಹಂತಕರ ಮನವಿಯನ್ನ ಹೈಕೊರ್ಟ್ ಪರಿಗಣಿಸಿದೆ. ನ್ಯಾಯಮೂರ್ತಿ ರವಿ ಮಳಿಮಠ್ ಹಾಗೂ ಮೈಕಲ್ ಡಿ ಕುನ್ಹಾ ನ್ಯಾಯಾದೀಶರಿದ್ದ ವಿಭಾಗೀಯ ಪೀಠ, ಆರೋಪಿಗಳಿಗೆ ಗಲ್ಲು ಶಿಕ್ಷೆ ರದ್ದುಗೊಳಿಸಿದೆ. ಬದಲಾಗಿ, ಆರೋಪಿಗಳಾದ, ನಲ್ಲ ತಿಮ್ಮ. ಲಕ್ಷ್ಮಿ, ಮುನಿಕೃಷ್ಣ, ವೆಂಕಟೇಶ್​ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ,. ಈ ಮೂಲಕ, ಗಲ್ಲು ಶಿಕ್ಷೆಯಿಂದ ಪಾರಾದ ಆರೋಪಿಗಳು ಜೀವಾವಧಿ ಶಿಕ್ಷೆಗೆ ತೃಪ್ತಿ ಪಟ್ಟಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೂ, ಇನ್ನೂ ಮೂರು ಕೊಲೆ ಪ್ರಕರಣಗಳ ಸಂಬಂಧ, ಹೈಕೊರ್ಟ್ ತೀರ್ಪು ಹೊರಬೀಳಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ