
ಬೆಂಗಳೂರು(ಸೆ. 04): ಸಾಲು ಸಾಲಾಗಿ ಗುಂಡಿ ಬಿದ್ದಿರುವ ರಸ್ತೆ.. ಜೀವ ಭಯದಿಂದಲೇ ವಾಹನ ಚಾಲನೆ ಮಾಡುವ ಚಾಲಕರು. ರಸ್ತೆ ಹಾಳಾಗಿದ್ದರೂ ಕ್ಯಾರೇ ಎನ್ನದೇ ಇದೇ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವೂ ಹೋಗುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.... ಈ ರಸ್ತೆ ಯಾವುದೋ ಹಳ್ಳಿ ರಸ್ತೆಯಲ್ಲ. ಬೆಂಗಳೂರಿನ ಮಧ್ಯಭಾಗದ ಮೆಜೆಸ್ಟಿಕ್ ಬಳಿ ಇರೋ ಗೂಡ್'ಶೆಡ್ ರಸ್ತೆ.
ಈ ಗೂಡ್ ಶೆಡ್ ರಸ್ತೆಯ ತುಂಬ ಸಾಲು-ಸಾಲು ಗುಂಡಿಗಳು ಬಿದ್ದಿವೆ. ಮಳೆ ಬಂದರೆ ಸಾಕು ಈ ರಸ್ತೆಯಲ್ಲಿರೋ ಗುಂಡಿಗಳು ಕೆರೆಗಳಂತೆ ಆಗಿಬಿಡುತ್ತವೆ. ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕು. ಸ್ವಲ್ಪ ಯಾಮಾರಿದರೂ ಯಮನ ಪಾದ ಸೇರೋದು ಗ್ಯಾರಂಟಿ. ರಸ್ತೆ ಇಷ್ಟು ಹಾಳಾಗಿ ಹೋಗಿದ್ದರೂ ಈ ವಾರ್ಡ್'ನ ಕಾರ್ಪೊರೇಟರ್ ಪ್ರಮೋದ್ ಆಗಲಿ, ಈ ವಿಧಾನಸಭಾ ಕ್ಷೇತ್ರದ ಶಾಸಕ ಗುಂಡೂರಾವ್ ಆಗಲಿ, ರಸ್ತೆಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು, ಮೈಸೂರು ರಸ್ತೆಯಿಂದ ಮೆಜೆಸ್ಟಿಕ್'ಗೆ ಸಂಪರ್ಕ ಕಲ್ಪಿಸುವ ಈ ಗೂಡ್ ಶೆಡ್ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ರಸ್ತೆಗಳ ಗುಂಡಿ ಮುಚ್ಚಿ ಅಂತ ಹಲವು ಸಲ ವಾಹನ ಸವಾರರು ದೂರು ಅಧಿಕಾರಿಗಳಿಗೆ ನೀಡಿದ್ರು, ಅಧಿಕಾರಿಗಳು ಮಾತ್ರ ತಲೆಯನ್ನೇ ಕೆಡಿಸಿಕೊಂಡಿಲ್ಲವಂತೆ.
ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್ ಸಮೀಪವೇ ಇಂಥ ಕಿತ್ತೋಗಿರೋ ರಸ್ತೆ ಇದ್ರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಮುಚ್ಚಿ ಕೂತಿರೋದೇ ಒಂದು ಅಚ್ಚರಿ. ಏನಾದ್ರೂ ಅನಾಹುತ ಆಗೋಕೂ ಮುಂಚೆ ಈ ರಸ್ತೆಯ ಅವಸ್ತೆಯನ್ನು ಸರಿಪಡಿಸಬೇಕು. ಈ ಆಶಯದಲ್ಲಿ ಸುವರ್ಣನ್ಯೂಸ್ 'ಗುಂಡಿ ಮುಚ್ರೋ' ಎಂಬ ಅಭಿಯಾನ ಆರಂಭಿಸಿದೆ. ಇಂಥ ಗುಂಡಿಗಳನ್ನ ಮುಚ್ಚಿಸೋವರೆಗೂ ನಮ್ಮ ಪ್ರಯತ್ನ ನಿಲ್ಲೋದಿಲ್ಲ.
- ಮಮತಾ ಮರ್ಧಾಳ, ಸುವರ್ಣ ನ್ಯೂಸ್, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.