ಕುಶಿನಗರಕ್ಕೆ ಗುರುವಾರ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್ ಅವರು ಮೈನ್ಪುರ ಕೋಟ್ ಗ್ರಾಮದ ಮುಷರ್ ಸಮುದಾಯಕ್ಕೆ ಭೇಟಿ ನಿರ್ಧಾರವಾಗಿತ್ತು. ಹಾಗಾಗಿ, ಯೋಗಿ ಭೇಟಿಗೂ ಮುನ್ನ ಗ್ರಾಮಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು, ಸೋಪು, ತಲೆಗೆ ಶಾಂಪೂ ಮತ್ತು ಸೆಂಟ್ ವಿತರಿಸಿದ್ದಾರೆ.
ಲಖನೌ: ಸಿಎಂ ಭೇಟಿಗೂ ಮುನ್ನ ಸೋಪಿನಿಂದ ಸ್ನಾನ ಮಾಡಿ, ಮೈಗೆ ಸೆಂಟ್ ಹಾಕಿಕೊಳ್ಳುವಂತೆ ಅಧಿಕಾರಿಗಳು ದಲಿತರಿಗೆ ಸೂಚಿಸಿದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಕುಶಿನಗರದಲ್ಲಿ ಸಾಂಪ್ರದಾಯಿಕವಾಗಿ ಇಲಿ ಹಿಡಿದು ಜೀವನ ಸಾಗಿಸುವ ದಲಿತ ಕುಟುಂಬಗಳಿಗೆ ಅಧಿಕಾರಿಗಳು ಹೀಗೆ ಸೂಚಿಸಿದ್ದಾರೆ.
ಕುಶಿನಗರಕ್ಕೆ ಗುರುವಾರ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್ ಅವರು ಮೈನ್ಪುರ ಕೋಟ್ ಗ್ರಾಮದ ಮುಷರ್ ಸಮುದಾಯಕ್ಕೆ ಭೇಟಿ ನಿರ್ಧಾರವಾಗಿತ್ತು. ಹಾಗಾಗಿ, ಯೋಗಿ ಭೇಟಿಗೂ ಮುನ್ನ ಗ್ರಾಮಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು, ಸೋಪು, ತಲೆಗೆ ಶಾಂಪೂ ಮತ್ತು ಸೆಂಟ್ ವಿತರಿಸಿದ್ದಾರೆ.